ಗದುಗಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡದ ಮುಖ್ಯಮಂತ್ರಿ ಶ್ರೀ. ಬಿ.ಎಸ. ಯೆಡಿಯೂರಪ್ಪನವರು ಗೈರು!
ಹೌದು ನಾಳೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಬೇಕಿದ್ದ ಯಡಿಯೂರಪ್ಪನವರು ತಮ್ಮ ಸಚಿವ ಗಣದೊಂದಿಗೆ ಇಂದೋರ್ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಹೋಗಿರುವುದರಿಂದ ಅವರ ಅನುಪಸ್ಥಿತಿ ಅನಿವಾರ್ಯವಂತೆ! ಅವರ ಜೊತೆ ಅನಂತಕುಮಾರ್ ಮತ್ತಿತರ ಪ್ರಮುಖ ಸಚಿವ ಮಹಾಶಯರೂ ಕೂಡ ಅಲ್ಲೇ ಠಿಕಾಣಿ ಹೂಡಿರುವುದರಿಂದ ಸಮ್ಮೇಳನ ಸಾಹಿತ್ಯಮಾಯವಾಗುವ ಸದಾವಕಾಶ ಮತ್ತು ಒಂದು ಕನಸನ್ನು ಬಿತ್ತಿದೆ.
ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರೀ ಸಚಿವ ಶ್ರೀರಾಮುಲು ಒಬ್ಬರೇಶ್ರೀರಾಮ!