ಬ್ರೇಕಿಂಗ್ ನ್ಯೂಸ್ .....

ನಿರೀಕ್ಷಿಸಿ ನಾಳೆ....
ಗದಗದಲ್ಲಿ ಜರುಗಲಿರುವ ೭೬ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ - ನಿಮ್ಮ ನುಡಿನಮನದಲ್ಲಿ!
ಯಾವ ಯಾವ ಘೋಷ್ಟಿಗ್ಲುಂಟು ಈ ಬಾರಿ? ಸಂಮಾನಗಳಾರಾರಿಗೆ? ಅದರಲ್ಲಿ ಒಂದನ್ನ ಪರಿಚಿತ ಮುಖವಿದೆಯೇ? ಅದು ಸರಿ ಯಾರ್ಯಾರು ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಸ್ಟೇಜ್ ಹತ್ತುತ್ತಿದ್ದಾರೆ? ಯಾವ ವಿಷಯ? ಏನು ಮಾತು? ಈ ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾಳೆಯೇ ಉತ್ತರ....ನಾಳೆ ನುಡಿನಮನ ನೋಡಲು ಮರೆಯದಿರಿ
.

ಬ್ರೇಕಿಂಗ್ ನ್ಯೂಸ್ .....



ಕನ್ನಡದ ಮೇಷ್ಟ್ರು, ಸದ್ಯ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು, ಕನ್ನಡ ಸಾಹಿತ್ಯ ಸಮ್ಮೇಳನದ ಉಸ್ತುವಾರಿ ಹೊತ್ತವರು ಡಾ. ನಲ್ಲೂರು ಪ್ರಸಾದ್, ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ `ನುಡಿನಮನ'ದೊಂದಿಗೆ ಮಾತನಾಡಿದ್ದಾರೆ. ಪ್ರಸ್ತುತ ಸಾಹಿತ್ಯ ಸಮ್ಮೇಳನ, ಕಸಾಪ ಮತ್ತು ಕನ್ನಡದ ಸ್ಥಿತಿಗತಿಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಸಂಪೂರ್ಣ ಸಂದರ್ಶನ - ನಾಳೆ ನಿರೀಕ್ಷಿಸಿ......

ಬ್ರೇಕಿಂಗ್ ನ್ಯೂಸ್ .....




ಇಂದಿನ ಅತಿಪ್ರಮುಖ ಕನ್ನಡ ಲೇಖಕರಲ್ಲೊಬ್ಬರು ವಸುಧೇಂದ್ರ. ವ್ಯಾವಹಾರಿಕವಾಗಿ IT ಜಗತ್ತಿನಲ್ಲಿ ಮುಳುಗಿ ಹೋಗಿದ್ದರೂ, ಕನ್ನಡ ಸಾಹಿತ್ಯದ ಸವಿರುಚಿಯನ್ನು ಉಂಡವರು, ಉಣಬಡಿಸುತ್ತಿರುವವರು. ವಸುಧೇಂದ್ರ ಕನ್ನಡ ಕಥಾಲೋಕದ ಪ್ರಪಿತಾಮಹ ಎಂದೇ ಗುರುತಿಸಲಾದ ಮಾಸ್ತಿಯವರ ಕಥೆಗಳು ಮತ್ತು ಅವರ ಅನುಭವದ ಕುರಿತು ಬರೆದಿದ್ದಾರೆ. ಅವರು ಹೇಗೆ ಇಂದಿಗೂ ಮೇಲ್ಪಂಕ್ತಿಯಲ್ಲಿ ನಿಂತು ಮಾರ್ಗದರ್ಶಕರಾಗಿದ್ದಾರೆ ಎಂದು ನಮ್ಮೊಡನೆ ಹಂಚಿಕೊಳ್ಳಲಿದ್ದಾರೆ....

ಕರ್ನಾಟಕ ಏನಾಗಬೇಕು?


ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಉತ್ತರ ಕರ್ನಾಟಕದ ಗದಗದಲ್ಲಿ. ಉತ್ತರ ಕರ್ನಾಟಕಕ್ಕೆ ನಮ್ಮ ಸರ್ಕಾರಗಳು ಮಲತಾಯಿ ಧೋರಣೆ ತೋರುತ್ತಿರುವುದೂ, ಆ ಭಾಗ ಅಭಿವೃದ್ಧಿಯಿಂದ ವಂಚಿತವಾಗಿ ಸೊರಗುತ್ತಿರುವುದು ನಾವೆಲ್ಲರೂ ಬಲ್ಲ ವಿಚಾರವೇ. ಇದೆ ಪ್ರತ್ಯೇಕ ರಾಜ್ಯದ ಕೂಗೇಳುವಂತೆ ಮಾಡಿದೆ.
ಈ ಹಿನ್ನಲೆಯಲ್ಲಿ ಕನ್ನಡದ ಹಿರಿಯ ಚೇತನ ಡಾ. ಪಾಟೀಲ ಪುಟ್ಟಪ್ಪ `ಕರ್ನಾಟಕ ಇಂದು ಏನಾಗಬೇಕಿದೆ?' ಎಂದು ಮಾರ್ಗದರ್ಶನ ಮಾಡಿದ್ದಾರೆ.


ಕರ್ನಾಟಕ ಏನಾಗಬೇಕು?

ಕನ್ನಡ ಭಾಷೆಯನ್ನು ಆಡುವ ಪ್ರದೇಶವನ್ನೆಲ್ಲ ಕನ್ನಡ ನಾಡು ಎಂದು ಕರೆಯುತ್ತಿದ್ದರು. ಆದರೆ ಕನ್ನಡ ಭಾಷೆಯನ್ನು ಆಡುವ ಜನರು ಒಂದೇ ಪ್ರಭುತ್ವಕ್ಕೆ ಎಂದೂ ಒಳಪಟ್ಟಿರಲಿಲ್ಲ. ಕರ್ನಾಟಕವೆಂಬ ಹೆಸರಿನ ರಾಜ್ಯವೂ ಇರಲಿಲ್ಲ. ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿಕೊಂಡಿದ್ದ ಪ್ರದೇಶವನ್ನು ಕನ್ನಡ ನಾಡೆಂದು ಕರೆಯುತ್ತಿದ್ದರು. ಕರ್ನಾಟಕ ಎನ್ನುವುದು ಒಂದು ರಾಜಕೀಯ ಸತ್ಯವಾಗಿ ಇರಲಿಲ್ಲದ ಕಾಲದಲ್ಲಿಯೂ ಕನ್ನಡಿಗರನ್ನು ಅವರ ವಿಶಿಷ್ಟ ಸಂಸ್ಕೃತಿಯ ಕಾರಣದಿಂದ, ಕರ್ನಾಟಕರ್ ಎಂದು ಕರೆಯುತ್ತಿದ್ದರು. ಇದರ ಉಲ್ಲೇಖ, ಪ್ರಾಚೀನ ತಮಿಳು ಕೃತಿಯಾದ ಶಿಲಪ್ಪಾದಿಕಾರನ್ ಎಂಬುದರಲ್ಲಿಯೂ ಬಂದಿದೆ. ಕನ್ನಡಿಗರ ಮನಸ್ಸಿನಲ್ಲಿ ಕರ್ನಾಟಕ ಎನ್ನುವುದು ಇದ್ದೇ ಇದ್ದಿತು. ಆದರೆ ಆ ಅಸ್ಪಷ್ಟ ಕಲ್ಪನೆ ಮೂರ್ತ ಸ್ವರೂಪ ಪಡೆದು ಪ್ರತ್ಯಕ್ಷ ಸತ್ಯವೆನಿಸುವ ಸಂಭವವಾಗಲಿ ಸಾಧ್ಯವಾಗಲಿ ಇರಲಿಲ್ಲ.

ಅನೇಕ ಐತಿಹಾಸಿಕ ಕಾರಣದಿಂದ ಕನ್ನಡ ಭಾಷೆಯನ್ನು ಆಡುವ ಜನರು ಇಪ್ಪತ್ತೆರಡು ಆಡಳಿತಗಳಲ್ಲಿ ಹಂಚಿ ಹೋಗಿದ್ದರು. 1947 ರಲ್ಲಿ ಬ್ರಿಟಿಷರು ಈ ದೇಶವನ್ನು ಬಿಟ್ಟು ತೊಲಗುತ್ತಾರೆ ಎನ್ನುವ ಸ್ಪಷ್ಟ ಸೂಚನೆ ಕಂಡುಬಂದಿದ್ದಿತು. ಆದರೆ ಬ್ರಿಟಿಷರು ಹೋಗಿ ಇಲ್ಲಿಯ ದೇಶೀಯ ಸಂಸ್ಥಾನಗಳು ಈ ದೇಶದಲ್ಲಿ ಇಲ್ಲದಂತಾಗುತ್ತವೆ ಎನ್ನುವುದನ್ನು ಊಹಿಸಲು ಯಾರೊಬ್ಬರಿಂದಲೂ ಸಾಧ್ಯವಿರಲಿಲ್ಲ. ಆದರೆ ಕರ್ನಾಟಕ ರಾಜ್ಯ ರಚನೆ ಆಗಬೇಕೆನ್ನುವ ಕೂಗು ಇದ್ದೇ ಇದ್ದಿತು ಬ್ರಿಟಿಷ್ ಅಧಿಪತ್ಯಕ್ಕೆ ಒಳಪಟ್ಟಿದ್ದ ಕನ್ನಡ ಪ್ರದೇಶಗಳು ಒಂದು ರಾಜ್ಯವಾಗಬೇಉ ಎನ್ನುವ ಬೇಡಿಕೆ, ಇಂದು ಹೋರಾಟದ ಸ್ವರೂಪವನ್ನು ಪಡೆದುಕೊಂಡಿವೆ. ಭಾರತವು ಸ್ವತಂತ್ರವಾಗುವುದಕ್ಕೆ ಮೂವತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಸೈಮನ್ ಅವರ ಸಲಹೆಯ ಮೇರೆಗೆ 1935 ನೆಯ ರಾಜ್ಯ ಘಟನೆ ರೂಪುಗೊಂಡಿತು. ಆ ಕಾನೂನಿನ ಅನ್ವಯ ರಚನೆಗೊಂಡ ಸಿಂಧ ಒರಿಸ್ಸಾ ಪ್ರಾಂತಗಳು 1937 ರಲ್ಲಿ ಅಸ್ತಿತ್ವದಲ್ಲಿ ಒಂದು ಕಾರ್ಯಾರಂಭ ಮಾಡತೊಡಗಿದವು.
ಬ್ರಾಹ್ಮಣೇತರ ಪಕ್ಷದ ಮುಂದಾಳುವಾಗಿದ್ದ ಸಿದ್ದಪ್ಪ ಕಂಬಳಿಯವರು (ಆಗ ಅವರಿನ್ನೂ ಸರ್ ಆಗಿರಲಿಲ್ಲ) ಸೈಮನ್ ಕಮೀಷನ್ ಮುಂದೆ ಸಾಕ್ಷ್ಯ ನುಡಿಯಲು ಹೋಗಬೇಕೆಂದಿದ್ದರು.

ಆದರೆ ಆಗಿನ ಕಾಂಗ್ರೆಸ್ ಮುಖಂಡರಾದ ಗಂಗಾಧರ ದೇಶಪಾಂಡೆ, ಕೌಜಲಗಿ ಶ್ರೀನಿವಾಸ ರಾವ್, ರಂಗನಾಥ ದಿವಾಕರ, ಆಲೂರು ವೆಂಕಟರಾಮ್ ಅವರು, ಕಂಬಳಿಯವರನನು ಬಿದ್ದು ಬೇಡಿಕೊಂಡರು. 'ನಾವು ಸೈಮನ್ ಆಯೋಗಕ್ಕೆ ಬಹಿಷ್ಕಾರ ಹಾಕಿದ್ದೇವೆ. ನೀವು ಆ ಆಯೋಗದ ಎದುರು ಹೋಗಿ ನಮ್ಮ ಮರ್ಯಾದೆ ಕಳೆಯಬೇಡಿ' ಅವರು ಕಂಬಳಿಯವರನ್ನು ತಡೆಹಿಡಿದ ಕಾರಣ ಅವರು ಸೈಮನ್ ಕಮೀಷನ್ವರೆಗೆ ಹೋಗಲಿಲ್ಲ. ಆಗ ಅವರು ಕಮೀಷನ್ ಎದುರು ಹೋಗಿದ್ದಾರೆ. ಬ್ರಿಟಿಷ್ ಅಧಿಪತ್ಯದ ಕನ್ನಡ ಪ್ರದೇಶಗಳು 1937 ರಲ್ಲಿಯೇ ಕರ್ನಾಟಕ ಪ್ರಾಂತವೆಂಬ ಹೆಸರನ್ನು ಪಡೆದು ಒಂದು ರಾಜಕೀಯ ಘಟಕವಾಗಿ ಭಾರತದ ಭೂಪಟದ ಮೇಲೆ ಕಾಣಿಸಿಕೊಳ್ಳುವ ಭಾಗ್ಯವನ್ನು ಪಡೆಯುತ್ತಿದ್ದವು.

ಕರ್ನಾಟಕ ಎನ್ನುವ ಭಾವನೆ, ಮೈಸೂರು ಸಂಸ್ಥಾನದ ಹೊರಗಿನ ಕನ್ನಡ ಪ್ರದೇಶಗಳಲ್ಲಿ ಉತ್ಕಟವಾಗಿದ್ದಂತೆ ಮೈಸೂರಿನಲ್ಲಿ ಉತ್ಕಟವಾಗಿರಲಿಲ್ಲ. ಕನ್ನಡ ಪ್ರಜ್ಞೆ, ಮೈಸೂರಿನ ಹೊರಗಿನ ಕನ್ನಡ ಪ್ರದೇಶದಲ್ಲಿಯೇ ಹೆಚ್ಚು ಜಾಗೃತವಾಗಿದ್ದಿತು. ಪ್ರತಿಷ್ಠಿತ ರಾಜರುಗಳಾದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದವರುಮೈಸೂರಿನ ಹೊರಗಿನವರೇ ಆಗಿದ್ದರು. ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ ಕನ್ನಡದ ಬಹುತೇಕ ಕವಿಗಳು ಮೈಸೂರಿನ ಹೊರಗಿನವರೇ ಆಗಿದ್ದಾರೆ. ಪಂಪ, ರನ್ನ, ಪೊನ್ನ, ಜನ್ನ ಕುಮಾರವ್ಯಾಸ, ಹರಿಹರ, ರಾಘವಾಂಕ, ಸರ್ವಜ್ಞ, ರತ್ನಾಕರ ವಣರ್ಿ, ಮುದ್ದಣ್ಣ ಎಲ್ಲರೂ ಮೈಸೂರಿನ ಹೊರಗಿನ ಕರ್ನಾಟಕದವರೇ ಆಗಿದ್ದಾರೆ.

ಸಾಮಾಜಿಕ ಕ್ರಾಂತಿಗೆ ಕಾರಣವಾದ ವಚನ ಸಾಹಿತ್ಯ ದಾಸ ಸಾಹಿತ್ಯಗಳ ಉಗಮ ಸ್ಥಾನ ಮೈಸೂರು ಅಲ್ಲ, ಉತ್ತರ ಕರ್ನಾಟಕ . . . .ಕರ್ನಾಟಕೀ ಸಂಗೀತದ ಉಗಮ ಸ್ಥಳ ಚಾಲುಕ್ಯರ ಬಾದಾಮಿ, ಹಿಂದೂಸ್ತಾನೀ, ಸಂಗೀತದ ನೆಲೆ ಗುಲ್ಬರ್ಗಾ. ಇಷ್ಟೆಲ್ಲ ವೈಭವದ ಐತಿಹಾಸಿಕ ಪರಂಪರೆಯನ್ನು ಪಡೆದಿದ್ದ ಕನ್ನಡ ಪ್ರದೇಶಗಳು ಮೈಸೂರನ್ನು ಒಳಗೊಂಡು ಒಂದು ರಾಜ್ಯವಾಗುವ ಭಾಗ್ಯವನ್ನು ಪಡೆದಿರಲಿಲ್ಲ. ಕನ್ನಡ ಭಾಷೆಯನ್ನು ಆಡುವ ಪ್ರದೇಶಗಳೆಲ್ಲ ಒಂದೇ ಪ್ರಭುತ್ವಕ್ಕೆ ಒಳಪಡಬೇಕು ಎನ್ನುವುದು ಇನ್ನೂ ಒಂದು ಕನಸಾಗಿ ಉಳಿದಿದ್ದ ಕಾಲದಲ್ಲೇ ಅಖಿಲ ಕನ್ನಡಿಗರ ಪ್ರಥಮ ಮಹಾಧಿವೇಶನವೊಂದು ನಿಜಲಿಂಗಪ್ಪ ಅವರ ಅಪೇಕ್ಷೆಯಂತೆ 1946ನೆಯ ಆಗಸ್ಟ್ ತಿಂಗಳು ದಾವಣಗೆರೆಯಲ್ಲಿ ಸಮಾವೇಶಗೊಂಡಿತು.

ಆಗ ಮೈಸೂರಿನಲ್ಲಿ ದಿವಾನರ ಆಡಳಿತ ನಡೆದಿದ್ದಿತು. ಆ ಮಹಾಧಿವೇಶನಕ್ಕೆ ಮೈಸೂರಿನ ನಾಮಾಂಕಿತ ಮುಂದಾಳುಗಳಾದ ಕೆ.ಸಿ.ರೆಡ್ಡಿ, ಕೆ.ಟಿ.ಭಾಷ್ಯಂ, ಎಚ್.ಸಿ.ದಾಸಪ್ಪ, ಎಚ್.ಸಿದ್ಧಯ್ಯ, ಟಿ.ಮುನಿಯಪ್ಪ, ಟಿ. ಸುಬ್ರಹ್ಮಣ್ಯ, ಎಚ್.ಕೆ.ವೀರಣ್ಣಗೌಡ, ಸಾಹುಕಾರ ಚನ್ನಯ್ಯ, ಕೆಂಗಲ್ ಹನುಮಂತಯ್ಯ ಮುಂತಾದವರೆಲ್ಲ ಬಂದಿದ್ದರು. ಆ ಮಹಾಧಿವೇಶನಕ್ಕೆ ಮುಂಬಯಿ ಮಂತ್ರಿ ಎಂ.ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಸರ್ಕಾರದ ಮಂತ್ರಿ ಕೆ.ಆರ್. ಕಾರಂತರು(ಶಿವರಾಮ ಕಾರಂತರ ಅಣ್ಣ) ಉದ್ಘಾಟಕರಾಗಿದ್ದರು.
ಆಗ ಮೈಸೂರಿನ ಮುಂದಾಳುಗಳು, ತಮ್ಮನ್ನು ಬಿಟ್ಟು ಕರ್ನಾಟಕ ಏಕೀಕರಣವನ್ನು ಮಾಡಿಕೊಳ್ಳಬಾರದೆಂದು ಆಲ್ಪರಿದು ಹೇಳಿಕೊಂಡರು. 'ನಾವು ಮಳೆಯಲ್ಲಿ ನೆನೆಯುತ್ತ ಹೊರಗೆ ಇದ್ದೇವೆ. ಚಳಿ ಹತ್ತಿಕೊಂಡು ನಡುಗುತ್ತಿದ್ದೇವೆ. ನೀವು ಒಬ್ಬರೇ ಬೆಚ್ಚಗೆ ಇರಬೇಡಿರಿ. ನಮ್ಮನ್ನು ಒಳಗೆ ಕರೆದುಕೊಳ್ಳಿರಿ'. ಕರ್ನಾಟಕದ ಬಗೆಗಿನ ಅವರ ಆಸಕ್ತಿ, ಮೈಸೂರಿನಲ್ಲಿ ಜವಾಬ್ದಾರೀ ಸಕರ್ಾರ ಬಂದು, ಅಧಿಕಾರ ತಮ್ಮ ಕೈಗೆ ಮುಖಂಡರ ಅನಾಸ್ಥೆಯಿಂದ ಕನರ್ಾಟಕ ಇಂದಿಗೂ ಕೊರಗುವಂತಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡುತ್ತಿದ್ದ ಯುವಕರನ್ನು ತಮ್ಮೆಡೆಗೆ ಕರೆದು ಸರ್ ಸಿದ್ಧಪ್ಪ ಕಂಬಳಿಯವರು ಹೇಳಿದ ಒಂದು ಮಾತು. ನಿನ್ನೆ ಮೊನ್ನೆ ಹೇಳಿದಂತೆ ನನ್ನ ನೆನಪಿನಲ್ಲಿ ಇಂದಿಗೂ ಉಳಿದುಕೊಂಡಿದೆ. ಆಗ ಅವರು ಹೇಳಿದ್ದರು. 'ಕರ್ನಾಟಕ ಏಕೀಕರಣ ಆಗುತ್ತದೆ. ಅದನ್ನು ತಪ್ಪಿಸುವುದು ಯಾರೊಬ್ಬರಿಂದಲೂ ಸಾಧ್ಯವಿಲ್ಲ. ಆದರೆ ನೀವು ಕತ್ತರೀ ಹುಡುಕುವವರ ಕೈಯಲ್ಲಿ ಸಿಗುತ್ತೀರಿ. ಮುದುಕನ ಮಾತೆಂದು, ಅವರು ಹೇಳಿದುದನ್ನು ನಾವು ಉಪೇಕ್ಷಿಸಿಬಿಟ್ಟೆದ್ದೆವು.

ಕಿಪ್ಲಿಂಗ್ಗಳು, ಪೂರ್ವವು ಪೂರ್ವವೇ, ಪಶ್ಚಿಮವು ಪಶ್ಚಿಮವೇ, ಅವರೆಡೂ ಎಂದೂ ಒಂದುಗೂಡುವುದಿಲ್ಲ.' ಎಂದು ಹೇಳಿದ್ದ. ಅವನ ಮಾತನ್ನು ಕರ್ನಾಟಕ ಪ್ರದೇಶಗಳಿಗೆ ಅನ್ವಯಿಸಿ, ಕೆಲವರು ಹೇಳುತ್ತಿದ್ದರು. ಅವರ ಮಾತು ನಮಗೆ ಒಪ್ಪಿಗೆ ಆಗಿರಲಿಲ್ಲ. ಕನರ್ಾಟಕ ಮೈಸೂರು ಬೇರೆ ಬೇರೆ ಅಲ್ಲ. ಅವೆರಡೂ ಒಂದೇ ದೇಹದ ಎರಡು ಭಾಗಗಳು ಎದು ನಾವು ಹೇಳುತ್ತಿದ್ದೆವು. ಈಗಲೂ ಕೂಡ ಅವು ಅನ್ಯೋನ್ಯವಾಗಿ ಕೂಡಿ ಬದುಕುವುದು, ಕೂಡಿ ಹೋಗುವುದು ಸಾಧ್ಯವಿದೆ. ಕನಡು ನನಸಾಗಬೇಕಾದರೆ, ಅದನ್ನು ನನಸು ಮಾಡುವ ಪ್ರಯತ್ನ ನಡೆಯಬೇಕು. ಚಿಕ್ಕ ರಾಜ್ಯಗಳು ಬೆಳೆಯಬಹುದು. ಆದರೆ ಅವುಗಳಿಗೆ ದೊಡ್ಡ ರಾಜ್ಯಗಳ ಪ್ರಭಾವ ಬರಲಾರದು.

ಮೈಸೂರಿನಲ್ಲಿ ಕರ್ನಾಟಕದ ಪ್ರೀತಿ ತುಂಬಿಕೊಂಡರೆ, ಉಳಿದುಕೊಂಡರೆ, ಈ ರಾಜ್ಯವು ಸಮಗ್ರವಾಗಿ ಮೈ ತುಂಬಿಕೊಂಡು, ಸಮೃದ್ಧಿಯನ್ನು ತಂದುಕೊಂಡು, ಭಾರತಕ್ಕೇ ಮಾದರಿ ಎನಿಸುವಂತೆ ಸುಂದರವಾಗಿ ಕಂಗೊಳಿಸುವುದು ಸಾಧ್ಯವಿದೆ. ಈ ರಾಜ್ಯದ ಸಾಧ್ಯತೆಗಳು ಸರ್ಕಾರವನ್ನು ನಡೆಸುವ ಮಂತ್ರಿಗಳಿಗೆ, ಸರ್ಕಾರದ ಆಡಳಿತ ಕಾರ್ಯಗಳನ್ನು ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಕಾಣಲಿಲ್ಲವಾದರೆ, ಈ ರಾಜ್ಯದ ಮುಖಚರ್ಯೆಯೇ ಬದಲಿಸುತ್ತದೆ. ನಾವು ದೃಷ್ಟಿ ಇರಿಸಿಕೊಂಡಂತೆ ಸೃಷ್ಟಿ ಕಾರ್ಯ ನಡೆಯುತ್ತದೆ. ಮೈಸೂರಿನವರು, ಮೈಸೂರಿನ ಹೊರಗಿನ ಕರ್ನಾಟಕದವರನ್ನು, ಮೈಸೂರಿನ ಹೊರಗಿನವರು ಮೈಸೂರಿನವರನ್ನು ಆಡಿಕೊಳ್ಳುವುದು ತಪ್ಪಬೇಕು. ಮೈಸೂರಿನ ಹೊರಗಿನ ಪ್ರದೇಶ ಹಿಂದುಳಿದಿರುವುದಕ್ಕೆ, ಆ ಪ್ರದೇಶದ ಶಾಸಕರು ಕಾರಣರೆಂದು, ಮೈಸೂರಿನವರು ಅವರೆಡೆಗೆ ಬೆರಳು ಮಾಡಿ ತೋರಿಸುತ್ತಿದ್ದಾರೆ.

ಅವರು ಇವರನ್ನು, ಇವರು ಅವರನ್ನು ಆಡಿಕೊಳ್ಳುವುದನ್ನು ಬಿಟ್ಟು ಪರಸ್ಪರರನ್ನು ಪ್ರೀತಿಸುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಸಮಗ್ರ ರಾಜ್ಯ ಬೆಳೆಯಬೇಕೆನ್ನುವ ವಿಚಾರದೊಂದಿಗೆ ನಾವು ಸಹಮತ ಉಳ್ಳವರಾಗಬೇಕಾಗುತ್ತದೆ. ಈಗ ಇಲ್ಲಿ ರಾಜಕಾರಣಿಯ ಕೆಲಸ ಇಲ್ಲ, ಮುತ್ಸದ್ದಿಯ ಕೆಲಸ ಇದೆ. ಅಧಿಕಾರದ ಸೂತ್ರ ಹಿಡಿದವರು ಮನೆಯ ಉತ್ತರಾಧಿಕಾರವನ್ನು ಪಡೆದ ಉಡಾಫೆಯ ದತ್ತು ಮಗನಂತೆ ಉಲಕೋಚಿ ವರ್ತನೆ ಇರಿಸಿಕೊಳ್ಳದೆ, ತಾನು ಉಸ್ತುವಾರಿಗೆ ತೆಗೆದುಕೊಂಡ ಆಸ್ತಿಯನ್ನು ಸಂರಕ್ಷಿಸಿ ಅದನನು ಸಂವರ್ಧನೆ ಮಾಡಬೇಕೆನ್ನುವ ದೃಷ್ಟಿಯನ್ನು ಇರಿಸಿಕೊಳ್ಳಬೇಕು. ಕರ್ನಾಟಕವೆಂಬ ರಾಜ್ಯದ ದೇಹದ ಎಲ್ಲ ಅಂಗಾಂಗಗಳು ಸರಿಯಾಗಿ ಹವಣುಕಟ್ಟಾಗಿ ಬೆಳೆದರೇನೇ ಅದು ಸುಂದರಾಕೃತಿಯನ್ನು ಪಡೆದುಕೊಳ್ಳುತ್ತದೆ.

ಈ ರಾಜ್ಯವು ಸಮಗ್ರವಾಗಿ ಸುವ್ಯವಸ್ಥಿತವಾಗಿ ಬೆಳೆಯುವಂತೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿದೆ. ಈ ರಾಜ್ಯದ ಸಂಘಟನೆ ಶಿಥಿಲಗೊಳ್ಳದಂತೆ ರಾಜಕೀಯ ಜನರು ಈ ರಾಜ್ಯದ ಭಟ್ಟಿಯನ್ನು ಕಾಯ್ದುಕೊಂಡು ಹೋಗಬೇಕು. ರಾಜ್ಯದ ಎಲ್ಲ ಪ್ರದೇಶಗಳನ್ನು ಸಮಾನ ಭಾವನೆಯಿಂದ ನೋಡಿಕೊಳ್ಳಬೇಕು. ತಮ್ಮನ್ನು ಉಪೇಕ್ಷಿಸಲಾಗಿದೆ ಎಂದು ಈ ರಾಜ್ಯದ ಯಾವ ಪ್ರದೇಶದ ಜನರಿಗೂ ಹೃದಯದ ಉರಿ ಉಂಟಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಕುಟುಂಬದ ಯಜಮಾನನಲ್ಲಿ ಕುಟುಂಬ ಸದಸ್ಯರ ಬಗೆಗೆ ಪಕ್ಷಪಾತ ಭಾವನೆ ಇರಬಾರದು. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳುವುದು ಅಗತ್ಯವಿದೆ.

ಈ ರಾಜ್ಯದ ಜನರು, ದಕ್ಷಿಣ ಕರ್ನಾಟಕದಲ್ಲಿ ಇರಲಿ, ಅವರ ಆರೋಗ್ಯದ ಅವಶ್ಯಕತೆಗಳು ಒಂದೇ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ದಕ್ಷಿಣ ಕರ್ನಾಟಕದಲ್ಲಿ ಬಂದಂತೆ ಉತ್ತರ ಕರ್ನಾಟಕದಲ್ಲಿ ಬರುವುದು ಬೇಡವೆ? ನಿಮ್ಹಾನ್ಸ್ ಎಂಬ ಸಂಸ್ಥೆ ಬೆಂಗಳೂರಿನಲ್ಲಿ ಬಂದಂತೆ ಉತ್ತರ ಕರ್ನಾಟಕದಲ್ಲಿ ಏಕೆ ಬರುವುದಿಲ್ಲ? ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬಾರದೆಂದು ಹೇಳುತ್ತಾರೆ. ಅದೇ ರೀತಿ ಸೌಕರ್ಯಗಳನ್ನು ಕೂಡ ಸಮನಾಗಿ ಹಂಚಬೇಕು. ಶಿಕ್ಷಣದ ವಿಷಯದಲ್ಲಿ ಉದ್ದಿಮೆಗಳ ವಿಚಾರದಲ್ಲಿ ಬಹಳಷ್ಟು ಏರುಪೇರುಗಳು ಇವೆ. ರಾಜ್ಯದ ಯಾವ ಪ್ರದೇಶದ ಜನರೂ ತಮ್ಮ ಬೆಳವಣಿಗೆಯ ಅವಕಾಶಗಳಿಗೆ ವಂಚಿತರಾಗಬಾರದು. ಈ ರಾಜ್ಯದ ಒಂದು ಪ್ರದೇಶದ ಜನರಿಗೆ ಬೆಳವಣಿಗೆ ಅವಕಾಶಗಳಿಲ್ಲ. ಇನ್ನೊಂದು ಭಾಗದವರಿಗೆ ಎಲ್ಲವೂ ಉಂಟು. ಅವರು ಅವ್ವನ ಕೂಡ, ಅಪ್ಪನ ಕೂಡ ಇಬ್ಬರೊಂದಿಗೂ ಉಣ್ಣುತ್ತಾರೆ. ಆದರೆ ಮತ್ತೊಬ್ಬರಿಗೆ ಆ ಅವಕಾಶವೇ ಇಲ್ಲ.

ಇಲ್ಲಿಯವರೆಗೆ ಈ ರಾಜ್ಯದಲ್ಲಿ ಅಸಮಾನತೆ ಉಳಿದಿರುವುದು ಒಂದು ದುಃಸ್ವಪ್ನ. ಅದು ಕಳೆದುಹೋಗುವಂತೆ ನಾವು ಕ್ರಮಗಳನ್ನು ಕೈಗೊಂಡರೆ ನಮ್ಮ ನಾಳೆಗಳೆಲ್ಲ ಸುಂದರವಾಗುತ್ತವೆ.


ಕನ್ನಡ ಮಹಿಳಾ ಸಾಹಿತ್ಯ ಒಂದು ಕಿರುನೋಟ

ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವವರು ಕರುನಾಡ ಹಿರಿಯಕ್ಕನಂತಹ ಗೀತ ನಾಗಭೂಷಣ್ರವರು. ಸಾಹಿತಿಗಳು ಅಂದರೆ ನಮಗೆ ಮೊದಲು ಬರುವ ಚಿತ್ರವೇ ಜುಬ್ಬಾ, ಪೈಜಾಮ, ಗಡ್ಡ,..ಆ ಕಲ್ಪನೆಯಲ್ಲಿ ಸೀರೆ ಏಕಿಲ್ಲ ಎಂಬುದರ ಕುರಿತು ಶಶಿಕಲಾ ವೀರಯ್ಯಸ್ವಾಮಿಯವರು ಚರ್ಚಿಸಿದ್ದಾರೆ...


ಕನ್ನಡ ಮಹಿಳಾ ಸಾಹಿತ್ಯ ಒಂದು ಕಿರು ನೋಟ

ಸ್ನೇಹಿತರೇ, ವಿಷಯದ ವ್ಯಾಪ್ತಿ ವಿಶಾಲವಾದುದು. ಸ್ಥಳಾವಕಾಶ ತುಂಬಾ ಚಿಕ್ಕದು. ಲೇಖನದ ಆಶಯಕ್ಕೆ, ಸಮಗ್ರತೆಯ ಕೊರತೆ. ಅನಿಸಿದಂತೆ ನನ್ನ ತಪ್ಪಲ್ಲ. ಆದರೂ ಕ್ಷಮಿಸಿ, ಮಹಿಳಾ ಸಾಹಿತ್ಯವನ್ನು ಮೂರು ವರ್ಗೀಕರಣಗಳಲ್ಲಿಟ್ಟರೆ ನೋಟ ಸ್ವಲ್ಪ ಮಟ್ಟಿಗೆ ತಿಳಿಯಾಗಬಹುದು. 1) ಜನಪದ ಸಾಹಿತ್ಯ 2) ವಚನ ಕಾರ್ತಿಯರು ಮತ್ತು ಹರಿದಾಸಿಯರು 3) ಆಧುನಿಕ ಸಾಹಿತ್ಯ. ಆನಪದರಲ್ಲಿ ಅಕ್ಷರಾಭ್ಯಾಸವಿಲ್ಲದದ್ದರೂ, ಬದುಕಿನ ಅನುಭವಗಳನ್ನು ಅವರು ಪದ್ಯ (ತ್ರಿಪದಿ)ಗಳ ಮೂಲಕವೋ ಕಥೆಗಳ ಮೂಲಕವೋ ದೇಸೀ ಸಾಹಿತ್ಯವನ್ನು ಜಾರಿಯಲ್ಲಿಟ್ಟಿದ್ದರು. ಹೆನ್ಣು ಮಕ್ಕಳ ಕಾವ್ಯವಂತೂ ತುಂಬಾ ತೀವ್ರವಾಗಿತ್ತು. 12ನೆಯ ಶತಮಾನದ ಮತ್ತು ಅದಕ್ಕೆ ಹತ್ತಿರದ ಹಿಂದು-ಮುಂದಿನ ಕಾಲ ಘಟ್ಟಗಳಲ್ಲಿ ಮಹಿಳೆಯರು ಸಾಹಿತ್ಯ ರಚನೆಗಳಲ್ಲಿ ತೊಡಗಿಕೊಂಡಿದ್ದರು. ಆದರೆ 12ನೆಯ ಶತಮಾನದ ಸಮಾಜೋಧಾಮರ್ಿಕ ಕ್ರಾಂತಿಯಲ್ಲಿ ಭಾಗವಹಿಸಿದ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳಲ್ಲಿ 33 ಜನ 'ವಚನ' ವೆಂಬ ಪ್ರಕಾರದಲ್ಲಿ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ. ಜಗತ್ತಿನ ಮಾಣ ಮಹಿಳಾ ಸಾಹಿತ್ಯದಲ್ಲಿ ಒಂದೇ ಕಾಲಕ್ಕೆ ಇಷ್ಟು ಜನಸಮಾಜ ಮುಖೀ ಸಾಹಿತ್ಯ ರಚನೆ ಮಾಡಿದ್ದು, ಕಡಿಮೆ ಎಂದೇ ಹೇಳಬೇಕು. ಹರಿದಾಸಿಯರು. ಉತ್ಕಟವಾದ ಭಕ್ತಿ ಪಂಥವನ್ನು ಹುಟ್ಟು ಹಾಕಿದರು.

ಆಧುನಿಕ ಕಾಲದಲ್ಲಿ ವಿದ್ಯಾಭ್ಯಾಸದ ಕಾರಣವಾಗಿ, ಬಹಳ ಜನ ಮಹಿಳೆಯವರು ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ತಮ್ಮ ಅಭಿವ್ಯಕ್ತಿಗಾಗಿ ದುಡಿಸಿಕೊಂಡಿದ್ದಾರೆ. ವಸ್ತುವಿನ ಆಯ್ಕೆಯಲ್ಲಿ ಕೂಡ ಬದುಕಿನ ಎಲ್ಲಾ ಕ್ಷೇತ್ರಗಳನ್ನು ಸ್ಪರ್ಶಿಸಿದ್ದಾರೆ. ಬಹುಶಃ ಹೆಚ್ಚಿನ ಸಂಖ್ಯೆಯಲ್ಲಿ ಕಾದಂಬರಿ ಪ್ರಕಾರವು ಜನಮೆಚ್ಚಿಗೆಯನ್ನು ಪಡೆದಿದೆ. ಅನೇಕರ ಕಾದಂಬರಿಗಳು-ಕಾವ್ಯಗಳು- ಬೇರೆ ಭಾಷೆಗಳಿಗೂ ಅನುವಾದಗೊಂಡಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ-ನಾಡೋಜಗಳಂಥ ಗೌರವಗಳಿಗೆ ಪಾತ್ರರಾದವರೂ ಆಧುನಿಕ ಕನ್ನಡ ಸಾಹಿತ್ಯದಲ್ಲಿದ್ದಾರೆ. ಮಹಾಕಾವ್ಯಗಳು ನಮಗೆ ಲಭ್ಯವಿವೆ. ವಿಮರ್ಶಾಕ್ಷೇತ್ರ- ಸಂಶೋಧನಾ ಕ್ಷೇತ್ರಗಳು, ಹಿಂದೆಂದಿಗಿಂತಲೂ ಇಂದು ತಮ್ಮನ್ನು ಹೆಚ್ಚು ವಿಸ್ತರಿಸಿಕೊಂಡಿವೆ. ಆದರೂ ಗಣನೀಯ ಸಂಖ್ಯೆಯ ಬಾಹುಳ್ಯವಿದ್ದರೂ, ಅದಕ್ಕೆ ನವ-ನವೀನ ಆಯಾಮಗಳು ಏಕೆ ದಕ್ಕಲಿಲ್ಲ? ಎನ್ನುವುದೊಂದು ಪ್ರಶ್ನೆ. ಅಕ್ಕಮಹಾದೇವಿಯಿಂದ ಹಿಡಿದು ತಿರುಮಲಾಂಬೆಗೆ, ಜಯದೇವಿತಾಯಿ ಲಿಗಾಎ, ಅನುಪಮಾ, ನಿರಂಜನ, ನಿರುಪಮಾ, ಕಮಲಾ ಹಂಪನಾ, ಟಿ.ಸುನಂದಮ್ಮ, ವೈದೇಹಿ, ಸಾರಾ ಅಬುಬಕ್ಕರ, ಶಾಂತಾ ಮಾಳಾಡ, ವೀಣಾ ಶಾಂತೇಶ್ವೃ, ನೇಮಿಚಂದ್ರ, ಪ್ರತಿಭಾ, ಲಲಿತಾ, ಸಿದ್ಧಬಸವಯ್ಯ..ಹೀಗೆ ಪತ್ನಿಯನ್ನೇ ಮಾಡಬಹುದು. ಇವರೆಲ್ಲ ಕನ್ನಡದ ವಿವಿಧ ಪ್ರಕಾರಗಳನ್ನು ಸಮೃದ್ಧಗೊಳಿಸಿದವರು. ಗಮನಾರ್ಹ ಬರವಣಿಗೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದವರು.

ಆದರೂ ಪರರಾಜ್ಯಗಳಿಗೆ ಹೋಲಿಸಿದಾಗ- ಜಾಗತಿಕ ಮಟ್ಟದ ಮಹಿಳಾ ಸಾಹಿತ್ಯದ ಹಿನ್ನೆಲೆಯಲ್ಲಿ ಗಮನಿಸಿದಾಗ, ಮಹಿಳಾ ಸಾಹಿತ್ಯದ ಸ್ಥಾನ ಎಲ್ಲಿದೆ?
'ಆನಾ ಆಹ್ಮತೋವಾ' ರಷ್ಯಾ ದೇಶದ ಹೆಸರಾಂತ ಕವಿ. ಅವಳ ಕಾವ್ಯ ರಾಜಕೀಯ ಯುದ್ಧಗಳ ಭೀಕರತೆಯನ್ನೂ, ಜೀವನದ ನಿರರ್ಥಕತೆಯನ್ನೂ ತುಂಬಾ ಆಳವಾದ ನೆಲೆಯಲ್ಲಿ ಪ್ರಶ್ನಿಸುವಂಥದು. 1986ರಲ್ಲಿ ರಷ್ಯಾದೇಶವು ಅವಳ ಜನ್ಮ ಶತಾಬ್ಧಿಯನ್ನು ವಿಜೃಂಭಣೆಯಿಂದ ಆಚರಿಸಿತು. ಅಷ್ಟೇ ಅಲ್ಲ, ಆಕಾಶದಲ್ಲಿನ ಒಂದು ಗ್ರಹಕ್ಕೆ ಅವಳ ಹೆಸರನ್ನು ಕೂಡಾ ಇಡಲಾಯಿತು. ಇದು ಜಗತ್ತಿನ ಒಂದು ಉದಾಹರಣೆಯಾದರೆ ಬಂಗಾಲೀ ಭಾಷೆಯಲ್ಲಿ ಮಹಾಶ್ವೇತಾದೇವಿ, ಯಂಥವರು ಆದಿವಾಸಿ ಜನರ ಜೊತೆ ಕಾಡಿನಲ್ಲೇ ವಾಸಮಾಡುತ್ತಾ, ಅವರ ಪರವಾಗಿ ಸರಕಾರದೊಡನೆ ಅದನ್ನೇ ಸಾಹಿತ್ಯ ರಚನೆ ಮಾಡಿದವರು. ಬಂಗಾಲಿಯಲ್ಲೇ ಮೂರು ಜನ ಮಹಿಳೆಯವರು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಪಂಚಾಚಿನ ಅಮೃತಾಪ್ರೀತಂ, ಮಲೆಯಾಳದ ಮಾಧವೀ ಕುಟ್ಟಿ (ಕಮಲಾ ದಾಸ್) ತಮ್ಮ ದಿಟ್ಟ ಧೋರಣೆಗಳಿಮದ ಜಗತ್ಪ್ರಸಿದ್ಧರಾದವರು, ಇತ್ತಿಚೆಗೆ ಮರಾಠಿ ಮಹಿಳಾ ಸಾಹಿತ್ಯದಲ್ಲಿ ಪ್ರಕಟವಾಗುತ್ತಿರುವ ಆತ್ಮಚರಿತ್ರೆ ಅಥವಾ ಆತ್ಮಕಥೆಗಳು, ಓದುಗರನ್ನು ಬೆಚ್ಚಿ ಬೀಳಿಸುತ್ತಿವೆ. ಯಾವ ಮುಲಾಜೂ ಇಲ್ಲದೇ, ನಿಸ್ಸಂಕೋಚವಾಗಿ , ನಿಭರ್ೀತರಾಗಿ ಬರೆಯುತ್ತಿರುವ ಅಲ್ಲಿಯ ಹೆಣ್ಣುಮಕ್ಕಳು ವಿಶೇಷವಾಗಿದ ಧಾಡಸೀತನದಿಂದಾಗಿ ಮಹಿಳಾ ಸಾಹಿತ್ಯದಲ್ಲಿ ಒಂದು ಹೊಸ ಸಂಚಲನೆಯನ್ನುಂಟು ಮಾಡಿದ್ದಾರೆ.

ಇದೆಲ್ಲಾ ಕನ್ನಡದಲ್ಲೇಕೆ ಇನ್ನೂ ಸಾಧ್ಯವಾಗಿಲ್ಲ? ಎಂಬ ಪ್ರಶ್ನೆ ಪದೇ ಪದೇ ನಮಗೆದುರಾಗುತ್ತಿದೆ. ಉತ್ತರಗಳ ದಟ್ಟಣೆ ಅಧಿಕವಾಗಿದೆ. ನಾನು ಕೆಲವನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಇತ್ತೀಚೆಗೆ ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ, 'ಶತಮಾನದ ಮಹಿಳಾ ಕಾವ್ಯ' ಎಂಬ ಕೃತಿಯನ್ನು ಸಂಪಾದಿಸಿಕೊಟ್ಟೆ. ಅದಿನ್ನೂ ಪ್ರಕಟಣೆಯ ಹಂತದಲ್ಲಿದೆ. ಅದಕ್ಕೊಂದು ಸುಧೀರ್ಘ ಪ್ರಸ್ತಾವಣೆಯನ್ನು ಬರೆದಿದ್ದೇನೆ. ಅಲ್ಲಿಯ ಮಾತುಗಳು ಇಲ್ಲಿಯೂ ಪ್ರಸ್ತುತವಾಗುವುದರಿಮದ ಕೆಲವನ್ನು ಎತ್ತಿಕೊಂಡಿದ್ದೇನೆ.

ಕನ್ನಡದಲ್ಲಿ ಸಂದರ್ಭದಲ್ಲಿ ಬರೆದಿರುವ, ಬರೆಯುತ್ತಿರುವ ಹೆಣ್ಣುಮಕ್ಕಳೆಲ್ಲ ಕೌಟುಂಬಿಕ ಜವಾಬ್ದಾರಿಗಳನ್ನು ಹೊತ್ತುಕೊಂಡೇ ಇದ್ದವರು. ಕೌಟುಂಬಿಕ ಬದ್ಧತೆ, ಹೆಣ್ಣಿಗೆ ಹೇರಿದ ಅನಿವಾರ್ಯ ಹೊಣೆ. ಅವಳಿಗೆ ಕುಟುಂಬವೇ ವಿಶ್ವ. ಆದರೆ ಗಂಡಿಗೆ, ಹೆಣ್ಣು ಕೇವಲ ಅವನ ವಿಶ್ವದ ಒಂದು ಘಟಕ ಮಾತ್ರ. ಅವಳಷ್ಟು ತೀವ್ರವಾಗಿ ಅವನು ತನ್ನನ್ನು ಕುಟುಂಬಕ್ಕೆ ಕಟ್ಟಿಕೊಳ್ಳಲಾರ. ಅದು ಅವನ ಜಾಯಮಾನವೇ ಅಲ್ಲ. ಗಂಡಸಿಗೆ, ತಾನು ಗಂಡಸಾಗಿರುವುದೇ ಒಂದು ಅಹಂಕಾರ (ಈಗೋ) ಇದು ಈಗೋ-ಆಗೋ ಹೋಗುವಂಥದ್ದಲ್ಲ. ಈ ಅಹಂನ ಜಗತ್ತಿನಲ್ಲಿ, ಅನಿಗೆ ಅವನ ಅಂತಸ್ತು, ಸಂಪತ್ತು, ಸ್ನೇಹಗಳಿಗೆ ಪ್ರಥಮ ಆದ್ಯತೆ, ಹೆಂಡತಿ-ಮಕ್ಕಳು, ಅವನ ವಿಶ್ವ ಸಂಚಾರದ ನದಿಯ ಎರಡು ದಡಗಳು ಮಾತ್ರ. ನದಿಯ ರಭಸಕ್ಕೆ ಬೆರಗಾಗುವ ಲೋಕ, ಅದನ್ನು ತೋಳಿನೊಳಗೆ ರಕ್ಷಿಸಿದ ದಡಗಳನ್ನು ಎಲ್ಲಿ ಗಮನಿಸುತ್ತದೆ? ದಡಗಳಿಗಾದರೂ, 'ಲೋಕ ತನ್ನನ್ನು ಕಂಡು ಬಎರಗಾಗಲೀ' ಎಂದು ಎಲ್ಲಿರುತ್ತದೆ? ಅದರ ಲಕ್ಷ್ಯವೆಲ್ಲ ತನ್ನ ತಾಯ್ತನದ ಸಂಭ್ರಮದಲ್ಲಿ ತಲ್ಲೀನವಾಗಿರುತ್ತದೆ. ತನ್ನ ತೋಳದಂಡೆಗಳಲ್ಲಿ ಕುಟುಂಬವನ್ನು ಸಂರಕ್ಷಿಸುವಲ್ಲೇ ಇಡೀ ತನ್ನ ಶಕ್ತಿ-ಚೈತನ್ಯಗಳನ್ನು ಧಾರೆ ಎರೆಯುತ್ತದೆ.

ಆದರೆ ಕುಟುಂಬದ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಲು, ಅವಳೂ ಹೆಗಲು ಕೊಡಲೂ ಉದ್ಯೋಗಿಯಾಗಬೇಕಾಗುತ್ತದೆ. ಆಧುನಿಕ ಜೀವನ ಶೈಲಿಗೆ ಉದ್ಯೋಗ ಅನಿವಾರ್ಯವಾದಾಗ ಅದು ಅವಳ ಬದುಕಿನ ಚೈತನ್ಯವನ್ನು ಒಳಗೊಳಗೇ ಖಾಲಿ ಮಾಡುತ್ತದೆ. ಹೈರಾಣು ಮಾಡುತ್ತದೆ. ಈಗ ಎರಡು ದೋಣಿಯ ಪ್ರಯಾಣದಲ್ಲಿ ಏಕಾಂತ, ಏಕಾಗ್ರತೆ, ಅನನ್ಯತೆಗಳು, ಅಲಭ್ಯವಾಗುವ ಕಾರಣ ಮತ್ತೆ ಮತ್ತೆ ಈ ಕೌಟುಂಬಿಕ- ಔದ್ಯೋಗಿಕ ಸುಳಿಗಳಲ್ಲಿ ಸುತ್ತತೊಡಗುವ ಸಾಹಿತ್ಯದ ಶಿಲ್ಪ ಅನೇಕಬಾರಿ ಶಿಥಿಲಗೊಳ್ಳುತ್ತದೆ. ಮಾನಸಿಕ-ದೈಹಿಕ ದಣಿವುಗಳು, ಸೃಜನಶೀಲ ಉಲ್ಲಾಸವನ್ನು ಕೊಂದು ಹಾಕುತ್ತವೆ.

ಪುರುಷ ಪ್ರಧಾನ ವ್ಯವಸ್ಥೆಯ, ಔದ್ಯಮಿಕ ಕ್ಷೇತ್ರ ಅವಳ ಪ್ರತಿಭೆಯನ್ನು ತುಳಿದು ಹಾಕಲು ಯತ್ನಿಸುತ್ತದೆ. ಇಂಥಲ್ಲಿ ಲೈಂಗಿಕ ಶೋಷಣೆಯ ಸಮಸ್ಯೆಗಳು ಇಂದು ಜಾಗತಿಕ ಮಟ್ಟದಲ್ಲಿ ಚಚರ್ೆಯಾಗುತ್ತಿವೆ. ದಿಟ್ಟವಗಿ, ಬದುಕುವ ಬರೆಯುವ ಹೆಣ್ಣನ್ನು ಈ ವ್ಯವಸ್ಥೆ ಹಿಂಡಿ ಪಿಂಡಿ ಮಾಡಿ ಬಿಡುತ್ತದೆ. (ಹೈದ್ರಾಬಾದ್ನಲ್ಲಿ ತಸ್ಲೀಮಾ ನಸ್ರೀಂ ಮೇಲೆ ದಿನಾಂಕ: 09-08-2007 ರಲ್ಲಿ ಹಲ್ಲೆನಡೆಯಿತು) ಇವೆಲ್ಲವುಗಳ ಜೊತೆಗೆ, ಬಸಿರು-ಬಾಣಂತನ-ಶಿಶುಪಾಲನೆಗಳು, ಅವಳ ಶಕ್ತಿ-ಸಮಯಗಳ ಬಹುಪಾಲನ್ನು ಕಬಳಿಸುತ್ತವೆ. ಹೊರಜಗತ್ತಿಗೆ ತೆರೆದುಕೊಳ್ಳಲು ಅವಳಿಗೆ ಸಾಧ್ಯವೇ ಆಗುವುದಿಲ್ಲ.

ಆದರೂ ಕೌಟುಂಬಿಕ ಚೌಕಟ್ಟಿನಲ್ಲಿ, ಗಂಡ-ಹೆಂಡತಿಯರ ಮನೋಭೂಮಿಕೆಗಳ ತಾಕಲಾಟಗಳು- ಮಧ್ಯವಯಸ್ಸಕ ಮಹಿಳೆಯರ ಚಡಪಡಿಕೆಗಳು, ದೈಹಿಕ ತುಡಿತಗಳು, ದೇಹ-ಮನಸ್ಸುಗಳ ಸೆಳೆತಗಳು, ವಿವಾಹಬಾಹಿರ ಸಂಬಂಧಗಳ ಜಟಿಲತೆಗಳು, ಸ್ತ್ರೀ-ಪುರಷರ ಭೌದ್ಧಿಕ ಸೌಹಚರ್ಯಗಳು, ಹೆಣ್ತನದ-ತಾಯ್ತನದ ವಿಶಿಷ್ಟಾ ಸ್ಪಂದನೆಗಳು ಇವೆಲ್ಲವುಗಳು ಕುರಿತು ನಾವಿನ್ನೂ ಮುಕ್ತವಾಗಿ ಬರೆದಿಲ್ಲ. ಅಮೆರಿಕನ್ ಲೇಖಕಿ 'ಲಾರಾ ಇಂಗಲ್ಸ್ ವೈಡರ್' 10 ಸಂಪುಟಗಳಲ್ಲಿ ತನ್ನ ಕುಟುಂಬದ ವಿಷಯವನ್ನೇ ಮನಮುಟ್ಟುವಂತೆ ಬರೆದು ವಿಶ್ವ ಪ್ರಸಿದ್ಧಳಾಗಿದ್ದಾಳೆ.

ಇವೆಲ್ಲವನ್ನೂ ಒಳಗೊಂಡು ಮಹಿಳಾ ಸಾಹಿತ್ಯದ ಸಾಧನೆ ಸಣ್ಣದೇನಲ್ಲ. ಇದನ್ನು ಡಾ|ಚಂದ್ರಶೇಖರ್ ಕಂಬಾರ ಅವರ ಮಾತುಗಳಿಂದ ಪುಷ್ಟೀಕರಿಸಬಹುದು. ಇಂದು ಪುರುಷ ಸಾಹಿತಿಗಳಿಗಿಂತ, ಮಹಿಳಾ ಸಾಹಿತಿಗಳು ಬದುಕನ್ನು ಭಿನ್ನವಾಗಿ ನೋಡುವ ಮೂಲಕ ಹೆಚ್ಚು ಸೃಜನಶೀಲರಾಗುತ್ತಿದ್ದಾರೆ. ಮಹಿಳೆಯರು ಪುರುಷರಿಗಿಂತ ಭಿನ್ನವಾಗಿ, ಭಾಷೆ-ಬದುಕನ್ನು ನೋಡುವುದರ ಮೂಲಕ ತಮ್ಮ ಸ್ವಂತಿಕೆಯನ್ನು ಹೆಚ್ಚು ಸ್ಪಷ್ಟಪಡಿಸುತ್ತಿದ್ದಾರೆ. ಕನ್ನಡ ಲೇಖಕಿಯರ, ಸ್ತ್ರೀ ಸಂವೇದನೆಯ ಸಾಹಿತ್ಯ ಪ್ರಕಾರಗಳು, ಹೆಚ್ಚು ಮೌಖಿಕವಾಗಿ ಮೂಡಿ ಬರುತ್ತಿವೆ. ಅವುಗಳನ್ನು ಯಾವ ವಿಮರ್ಶಕರೂ, ಲಘುವಾಗಿ ಪರಿಗಣಿಸುವಂತಿಲಲ್. (ಪ್ರಜಾವಾಣಿ.ದಿ.13.01.2004)