ಗೀತಕ್ಕನ ಸಮಾರೋಪ ನುಡಿ

Posted by Picasaಕನ್ನಡ ಉಳಿಬೇಕಾದ್ರೆ ಗ್ರಾಮೀಣ ಬದುಕು ಉಳೀಬೇಕು. ಅನ್ನದಾತನಿಗೆ ಅನ್ನವಿಲ್ಲದೆ ಆತ್ಮಹತ್ಯೆ ಮಾಡ್ಕೋತಾ ಇದ್ದಾನೆ. ಬೆಂಗಳೂರಿನ ಎಸಿ ರೂಮುಗಳಲ್ಲಿ ಕುಂತೋರಿಗೆ ನೆರೆ ಸಂತ್ರಸ್ತರ ಸಂಕಷ್ಟ ಅರ್ಥವಾಗೋಲ್ಲ. ಆಗಬೇಕಂದ್ರೆ ನಮ್ಮ ದೊರೆಗಳು ಒಂದು ರಾತ್ರಿ ಆ ಟಿನ್ ಶೆಡ್ಗಳಲ್ಲಿ ಕಳೀಬೇಕು.
ಸಾಹಿತ್ಯಿಕವಾಗಿ ನಾವು ದೊಡ್ಡೋರು ಮಾಡಬೇಕಾದ್ದು ಮಾದಾಗಿದೆ, ಮುಂದೆ ಈ ಕನ್ನಡಮ್ಮನ ತೇರು ಎಳೆಯುವ ಕೆಲಸ ನಮ್ಮ ಯುವ ಸಾಹಿತಿಗಳದ್ದು. ಅವರ ಮೇಲೆ ನಮಗಎ ಆ ನಂಬಿಕೆ ಇದೆ.

ಗೀತಕ್ಕನಿಗೆ ಆತ್ಮೀಯ ಸನ್ಮಾನ

Posted by Picasa

ಗದಗದಲ್ಲಿ ಹೊಸ ಸಂಪ್ರದಾಯ....

Posted by Picasaಸಮ್ಮೇಳನಾಧ್ಯಕ್ಷರಿಗೆ ದುಡ್ಡು ಕೊಡೊ ಸಂಪ್ರದಾಯವನ್ನು ಕೇಳಿದವರಿಲ್ಲ. ಈ ಬಾರಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಗದುಗಿನವರು. ಗೀತಕ್ಕನಿಗೆ ಗೌರವಾರ್ಥವಾಗಿ ೧೧,೧೧,೧೧೧ (೧೧ ಲಕ್ಷ, ೧೧ ಸಾವಿರದ ೧೧೧) ರೂ.ಗಳನ್ನು ಇವರು ಸಮರ್ಪಿಸಿದರು, ಅವರೂ ಒಪ್ಪಿಸಿಕೊಂಡರು.

ಯಡಿಯೂರಪ್ಪನವರದು ಅದೇ ರಾಗ ಅದೇ ಹಾಡು....

Posted by Picasaಯಡಿಯೂರಪ್ಪನವರು ಸಮ್ಮೇಳನದ ಉದ್ಘಾಟನೆಗೆ ಬರಬೇಕಿತ್ತು, ಬರಲಿಲ್ಲ. ಹೋಗಲಿ ಸಮಾರೋಪಕ್ಕಾದರೂ ಬಂದರು. ಆದರೆ ಅವರ ಭಾಷಣದಲ್ಲಿ ಅಂತ ಹೊಸತೇನೂ ಇರಲಿಲ್ಲ...ಅದೇ ರಾಗ, ಅದೇ ಹಾಡು...

ಅವರ ತಾಳ್ಮೆ ನಮಗೂ ಸ್ವಲ್ಪ ಬೇಕು...

Posted by Picasa
ಸಮ್ಮೇಳನದ ಸಮಾರೋಪ ಸಮಾರಂಭ ಮುಗಿಯುವವರೆಗೆ ಕೂತಿದ್ದ ವಿಶ್ವೇಶ್ವರ ಭಟ್ಟರ ತಾಳ್ಮೆಗೆ ನಮೋ ನಮೋ !

ಸ್ಟೇಜ್ ಮ್ಯಾಗೆ ಸಿದ್ದು, ಎಚ್ಕೆ ಕಾರ್ಯ ಕಲಾಪ


Posted by Picasa

ಮತ್ತೆ ರಾಮುಲುಗಾರಿ ಭಾಶನಮು ಮರಿಯು ಕನ್ನಡ ಟೊಪ್ಪಿಯು....


Posted by Picasa

ನಿಮ್ಮೂರ್ನಾಗ್ ಭಲೇ ಸೆಕೆ ಕಣ್ರೀ...



Posted by Picasa

ಇವರ ಭಾಷಣ ಅವರ ಕೂಗಾಟ .....




Posted by Picasaಕೊರೆದಿದ್ದು ಸಾಕು ನಿಲ್ಲಿಸ್ರೀ.. ಅನ್ನಿಸ್ಕೊಂಡ ಆಶಯ ಭಾಷಣ ಮಾಡಿದ ಪ್ರೊ. ಸಿ.ಪಿ.ಕೆ., ಶ್ರೀ ಶೈಲಪ್ಪ ಬಿದರೂರು ಜನರನ್ನು ಶಾಂತಗೊಳಿಸುತ್ತಿರುವುದು.

ಬಿಸಿಲಿಗೆ ಜ್ಯೂಸ್...



Posted by Picasa

ಜೋಗಿ ಬರೆದಿದ್ದಾರೆ....ಕಥೆ, ಕವಿತೆಯ ಮುಸ್ಸಂಜೆ ಪ್ರಸಂಗ


ನೀವು ಇತ್ತೀಚಿಗೆ ಓದಿದ ಇಂಗ್ಲಿಷ್ ಕವಿತೆ ಯಾವುದು?

ಬೈರನ್‌ನ ಫೇರ್‌ವೆಲ್ ಓದ್ತಿದ್ದೆ.. ತುಂಬಾ ಇಷ್ಟವಾಯ್ತು..’ಅಷ್ಟು ಹಳೆಯದಲ್ಲ ನಾನು ಕೇಳಿದ್ದು, ಇತ್ತೀಚಿಗೆ ಓದಿದ ಇತ್ತೀಚಿನ ಕವಿತೆ ಯಾವುದು?

ಅವರು ಒಂದು ಕ್ಷಣ ಮೌನವಾದರು. ಇತ್ತೀಚಿನ ಕವಿತೆ ಯಾವುದು ಎಂದು ನೆನಪಿಸಿಕೊಳ್ಳಲು ಯತ್ನಿಸಿದರು. ಅದು ಎಷ್ಟು ಇತ್ತೀಚಿನದಾಗಿರಬೇಕು ಎಂದು ತಮ್ಮನ್ನು ತಾವೇ ಕೇಳಿಕೊಂಡರು. ಆಡೆನ್ ನೆನಪಾದ, ನಿಸ್ಸಿಮ್ ಎಜಿಕೆಲ್ ನೆನಪಾದ. ಅದರಾಚೆಗೆ ಯಾರು ಬರೆದಿದ್ದಾರೆ? ಯಾರು ಕವಿತೆ ಬರೆಯುತ್ತಿದ್ದಾರೆ. ಅವರು ತಲೆಯಾಡಿಸಿದರು.

ಹೋಗಲಿ ಬಿಡಿ, ಇತ್ತೀಚೆಗೆ ಓದಿದ ಇತ್ತೀಚಿನ ಸಣ್ಣಕತೆ ಯಾವುದು?
ಅಲ್ಲೂ ಅದೇ ಹುಡುಕಾಟ. ಓ ಹೆನ್ರಿ, ಚೆಕಾಫ್, ಬ್ರೆಕ್ಟ್, ಟಾಲ್‌ಸ್ಟಾಯ್, ಜೇಮ್ಸ್ ಜಾಯ್ಸ್- ಅಲ್ಲಿಂದಾಚೆ ಯಾವ ಹೆಸರೂ ಹೊಳೆಯಲಿಲ್ಲ. ಸಾಹಿತ್ಯ ಕೂಡ ಚರಿತ್ರೆ ಆಗಿದೆ ಅನ್ನಿಸುತ್ತಿಲ್ಲವೇ. ನಮ್ಮ ಹುಡುಗರ ಸ್ಥಿತಿ ನೋಡಿ. ಇಂಗ್ಲಿಷ್ ಲಿಟರೇಚರ್ ಅಂದರೆ ಅದೇ ಶೆಲ್ಲಿ, ವರ್ಡ್‌ವರ್ಥ್, ಲ್ಯಾಂಬ್, ಕೀಟ್ಸ್, ಯೇಟ್ಸ್, ಬೈರನ್, ಮಾರ್ವೆಲ್, ಆಡೆನ್... ಅಲ್ಲಿಗೆ ನಿಂತು ಹೋಗುತ್ತದೆ. ಪ್ರಬಂಧದಲ್ಲೂ ಅದೇ ಹಳೆಯ ಬೇಕನ್, ಆರ್ವೆಲ್ ಹೆಸರೇ. ನಾಟಕಕಾರನ್ನು ಹುಡುಕುತ್ತಾ ಹೋದರೆ ಅದೇ ಷೇಕ್ಸ್‌ಪಿಯರ್, ಚೆಕಾಫ್, ಬ್ರೆಕ್ಟ್, ಬೆಕೆಟ್, ದಾರಿಯೋ ಫೋ ತೀರಾ ಇತ್ತೀಚೆಗೆ ಬಂದರೆ ಹೆರಾಲ್ಡ್ ಪಿಂಟರ್. ಹನಿಗವಿತೆಗಳನ್ನು ಓದಲು ಹುಡುಕಾಡಿದರೆ ಅದೇ ಅನಾದಿಕಾಲದ ಲಿಮೆರಿಕ್ಕು, ಅದದೇ ಹಾಯ್ಕು.

ಇಷ್ಟೇನಾ?
ಯಾವ ಇಂಗ್ಲಿಷ್ ಪತ್ರಿಕೆ ಕತೆಗಳನ್ನು ಪ್ರಕಟಿಸುತ್ತೆ ಹೇಳಿ? ಟೈಮ್ಸಾಫಿಂಡಿಯಾದಲ್ಲೋ ಅಥವಾ ಅದರಂಥ ಯಾವುದಾದರೂ ಇಂಗ್ಲಿಷ್ ಪತ್ರಿಕೆಯಲ್ಲೋ ಕವಿತೆ ಪ್ರಿಂಟಾಗುತ್ತಾ? ಹೋಗಲಿ ಅಂದರೆ ಒಂದು ಪ್ರಬಂಧ, ಒಂದು ಹನಿಗವಿತೆ. ಹುಡುಕಿದರೂ ಸಿಗುವುದಿಲ್ಲ. ಇಂಗ್ಲಿಷ್ ಭಾಷೆ ಎಷ್ಟು ಬರಡಾಗಿ ಹೋಗಿದೆ ಎಂದು ಯೋಚಿಸುತ್ತಾ ಕೂತೆ. ಅದು ಕೇವಲ ಮಾಹಿತಿಯನ್ನು ರವಾನಿಸುವ ಭಾಷೆಯಾಗಿದೆ. ತನ್ನ ಕಲಾತ್ಮಕ ಅಭಿವ್ಯಕ್ತಿಯನ್ನು ಕಳಕೊಂಡಿದೆ. ರಸಹೀನವಾಗಿದೆ. ಸುದ್ದಿಯನ್ನೂ ಮಾಹಿತಿಯನ್ನೂ ವರದಿಗಳನ್ನೂ ಪಠ್ಯಪುಸ್ತಕಗಳನ್ನೂ ಅದರಲ್ಲಿ ಬರೆಯಬಹುದು. ಈ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಕೇಳಿ ಉತ್ತರ ಪಡೆಯಬಹುದು. ದಾರಿ ನೂರಾರಿವೆ ಬೆಳಕಿನರಮನೆಗೆ ಎಂದು ರೂಪಕದಲ್ಲಿ ಹೇಳುವುದಕ್ಕೆ ಅದನ್ನು ಯಾರೂ ಬಳಸುತ್ತಿಲ್ಲ.

ಅಂದ ಮೇಲೆ ಸತ್ತ ಭಾಷೆ ಯಾವುದು? ಕನ್ನಡವಲ್ಲ, ಇಂಗ್ಲಿಷು. ಅದು ತನ್ನ ಸತ್ವವನ್ನು ಕಳೆದುಕೊಂಡು ಕಮರ್ಷಿಯಲ್’ ಭಾಷೆ ಆಗಿಬಿಟ್ಟಿದೆ. ಹಾಗೇನಿಲ್ಲ, ಇಂಗ್ಲಿಷಿನಲ್ಲಿ ಕಾದಂಬರಿ ಬರೆಯುತ್ತಿದ್ದಾರೆ.’ನಿಜ, ಕಾದಂಬರಿಗಳು ಸಾಕಷ್ಟು ಬರುತ್ತಿವೆ. ಸತ್ತ ಮೇಲೂ ಸಿಡ್ನಿ ಶೆಲ್ಡನ್ ಹೊಸ ಕಾದಂಬರಿಗಳು ಬಿಡುಗಡೆ ಆಗಬಲ್ಲ ಭಾಷೆ ಅದು. ಅದೇ ಹುಡುಕಾಟದಲ್ಲಿರುವ ಡಾನ್ ಬ್ರಾನ್‌ನಂಥ ಕಾದಂಬರಿಕಾರರಿದ್ದಾರೆ. ಅದನ್ನು ಬಿಟ್ಟರೆ ಅಲ್ಲಿ ಬರೆಯುತ್ತಿರುವವರ ಪೈಕಿ ಬಹುತೇಕ ಮಂದಿ ಮೂರನೆಯ ವಿಶ್ವಕ್ಕೆ ಸೇರಿದವರು. ಅರವಿಂದ ಅಡಿಗನಿಂದ ಉಪಮನ್ಯು ಚಟರ್ಜಿ ತನಕ, ಅಮಿತವ್ ಘೋಷ್‌ನಿಂದ ಸಲ್ಮನ್ ರಶ್ದಿಯ ತನಕ ಯಾರೂ ಇಂಗ್ಲೆಂಡಿನವರೂ ಅಲ್ಲ, ಅಮೆರಿಕನ್ನರೂ ಅಲ್ಲ. ಅತ್ಯದ್ಭುತ ಕಾದಂಬರಿಗಳನ್ನು ಕೊಟ್ಟ ರಷಿಯಾ ಇವತ್ತು ಬರಡಾಗಿ ಕೂತಿದೆ. ಸೊಗಸಾದ ನಾಟಕಗಳನ್ನು ಕೊಟ್ಟ ಫ್ರಾನ್ಸ್ ಸದ್ದಡಗಿದೆ. ಹಾಯ್ಕುಗಳ ಸಾಮ್ರಾಟ ಜಪಾನ್ ಮೌನವಾಗಿದೆ. ಸಾಹಿತ್ಯ ಬದುಕಿರುವುದು ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಇರಾನ್‌ಗಳಲ್ಲಿ.

ಹೇಗೆ ಅವರೆಲ್ಲ ದಿಕ್ಕೆಟ್ಟಿದ್ದಾರೆ ನೋಡಿ. ನಮ್ಮ ಕಾಲದ ಅತ್ಯುತ್ತಮ ಲೇಖಕ ಎಂದು ನಾವು ಪರಿಗಣಿಸುವ ಮಾರ್ಕೆಸ್‌ನಂಥ ಮಾರ್ಕೆಸ್ ಕೂಡ ತನ್ನ ಪಾಡಿಗೆ ಕಾದಂಬರಿ ಬರೆಯುತ್ತಾನೆ. ಆ ನಂತರ ಅದರ ಬಗ್ಗೆ ಅವನು ಮಾತಾಡುವುದೂ ಇಲ್ಲ. ತನ್ನ ಸಹಲೇಖಕನನ್ನು ಆತ ಓದುತ್ತಾನೆಯೇ ಎನ್ನುವುದೂ ಅನುಮಾನ. ತನ್ನ ಓರಗೆಯ ಬರಹಗಾರರ ಬಗ್ಗೆ ಅವನು ಬರೆದ ಒಂದು ಪುಟ್ಟ ಟಿಪ್ಪಣಿಯನ್ನಾಗಲೀ, ಅವನು ಯಾರಿಗೋ ಮುನ್ನುಡಿ ಬರೆದದ್ದಾಗಲೀ, ಇದು ನಾನು ಇತ್ತೀಚೆಗೆ ಓದಿದ ಒಳ್ಳೆಯ ಪುಸ್ತಕ ಎಂದು ಹೇಳಿದ್ದಾಗಲೀ ನಾನಂತೂ ನೋಡಿಲ್ಲ. ಪರಸ್ಪರರ ನಡುವೆ ಮಾತುಕತೆಯೇ ಇಲ್ಲ.ಎಲ್ಲರೂ ಏಕಾಂತಕ್ಕೆ ಸಂದಿದ್ದಾರೆ. ಯಾವುದೇ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗೆ ಸ್ಪಂದಿಸುವಂಥ ಕಾದಂಬರಿಗಳನ್ನೂ ಅವರೂ ಬರೆಯುತ್ತಿಲ್ಲ.

ಕನ್ನಡದಲ್ಲಿ ಹಾಗಿಲ್ಲ. ಒಬ್ಬ ತರುಣ ಲೇಖಕನ ಬಗ್ಗೆ ಅನಂತಮೂರ್ತಿ ಬರೆಯುತ್ತಾರೆ. ಬರಗೂರು ಪ್ರತಿಕ್ರಿಯಿಸುತ್ತಾರೆ. ಎಚ್ ಎಸ್ ವೆಂಕಟೇಶಮೂರ್ತಿ ಪುಸ್ತಕ ಬಿಡುಗಡೆ ಮಾಡಿ ಮಾತಾಡುತ್ತಾರೆ. ಹೊಸ ಲೇಖಕರು ಹೊಚ್ಚ ಹೊಸದಾಗಿ ಬರೆಯುತ್ತಿದ್ದಾರೆ. ವಿವೇಕ್ ದೇಶಕಾಲ’ದಂಥ ಪತ್ರಿಕೆ ಮಾಡುತ್ತಾ, ಅದರ ವಿಶೇಷಾಂಕದಲ್ಲಿ ಕನ್ನಡದ ಅಷ್ಟೂ ಸಮಕಾಲೀನ ಲೇಖಕರು ಇರಬೇಕು ಎಂದು ನಿರೀಕ್ಷಿಸುತ್ತಾರೆ. ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ದಲಿತ, ಬಂಡಾಯ ಮತ್ತು ಪ್ರಗತಿಶೀಲ ದನಿಗಳು ಇವತ್ತಿಗೂ ಬತ್ತಿಲ್ಲ. ಎಲ್ಲೋ ಕೂತು ಗೋಪಾಲಕೃಷ್ಣ ಪೈ ಸೊಗಸಾದ ಕಾದಂಬರಿ ಬರೆದು ಮುಂದಿಡುತ್ತಾರೆ. ತನಗಿಂತ ಕಿರಿಯರಾದವರನ್ನೂ ಒಳಗೊಳ್ಳುವಂತೆ ಕುಂವೀ ಬರೆಯುತ್ತಾರೆ. ಭೈರಪ್ಪ ಒಂದಲ್ಲ ಒಂದು ಚರ್ಚೆಯನ್ನು ಹುಟ್ಟುಹಾಕಿ ವಾದಕ್ಕೆ ನಿಲ್ಲುತ್ತಾರೆ.

ಸಾಹಿತ್ಯದ ವಾತಾವರಣ ಹಾಗೇ ಇರಬೇಕಲ್ವೇ? ಜೀವಂತವಾಗಿರುವ ಭಾಷೆಯ ಲಕ್ಷಣ ಅದು. ಏನಾದರೂ ಮಾಡುತಿರು ತಮ್ಮ, ನೀ ಸುಮ್ಮನಿರಬೇಡ ಎಂದು ಪ್ರತಿಯೊಬ್ಬರೂ ಏನಾದರೊಂದು ಮಾಡುತ್ತಿರುವ ಸ್ಥಿತಿ ಅದು. ಸುಮ್ಮನೆ ಪುಸ್ತಕಗಳತ್ತ ಕಣ್ಣು ಹಾಯಿಸಿ. ಇಲ್ಲಿ ಪ್ರಬಂಧ, ಕತೆ, ಕಾದಂಬರಿ, ವಿಡಂಬನೆ, ಹಾಸ್ಯ, ಹನಿಗವಿತೆ, ಕವಿತೆ, ಭಾವಗೀತೆ ಎಲ್ಲವೂ ಈಗಲೂ ಸೃಷ್ಟಿಯಾಗುತ್ತಿವೆ. ಇತ್ತೀಚೆಗೆ ಇಂಗ್ಲಿಷ್ ಸಣ್ಣಕತೆಗಳ ಸಂಕಲನವೊಂದು ಬಂದಿದ್ದರೆ ಹೇಳಿ; ದಿ ಅನ್‌ಅಕಸ್ಟಮ್‌ಡ್ ಅರ್ಥ್’ ಬಿಟ್ಟರೆ. ಅವೂ ನೀಳ್ಗತೆಗಳು. ಪರಸ್ಪರ ಸಂಬಂಧವಿರುವ ಮೂರು ನೀಳ್ಗತೆಗಳ ಸಂಕಲನ.

ಆಲ್ಬರ್ಟ್ ಕಮೂ ಏನೆಲ್ಲ ಬರೆದು ಅಚ್ಚರಿ ಹುಟ್ಟಿಸುತ್ತಿದ್ದ. ಕತೆ, ಕಾದಂಬರಿ, ಪ್ರಬಂಧ, ಆಧ್ಯಾತ್ಮ ಎಲ್ಲದರ ಕುರಿತೂ ಬರೆಯುತ್ತಿದ್ದ. ಆಗೆಲ್ಲ ಹೀಗೆ ಕೇವಲ ಕಾದಂಬರಿಯನ್ನೇ ಬರೆಯಬೇಕು ಎಂದು ಒತ್ತಾಯಿಸುವ ಏಜಂಟರು’ ಇರಲಿಲ್ಲ ಎಂದು ಕಾಣುತ್ತದೆ. ಈಗಂತೂ ಇಂಗ್ಲಿಷ್ ಕಾದಂಬರಿ ಬರೆಯುವುದು ಒಂದು ಎಕ್ಸ್‌ರ್‌ಸೈಜು. ಒಂದು ಫ್ಯಾಕ್ಟರಿ ಶುರುಮಾಡಿದಷ್ಟೇ ಸರ್ಕಸ್ಸು. ಯಾವುದರ ಬಗ್ಗೆ ಬರೆಯುತ್ತೀರಿ, ಯಾವ ಭಾಷೆ ಬಳಸುತ್ತೀರಿ, ಹೇಗೆ ಬರೆಯುತ್ತೀರಿ, ಎಷ್ಟು ಪರ್ಸೆಂಟ್ ಹಾಸ್ಯ ಇರುತ್ತೆ, ಯಾವ ದೇಶದ ಪಾತ್ರಗಳನ್ನು ಆಯ್ದು ಕೊಳ್ಳುತ್ತೀರಿ ಎನ್ನುವುದನ್ನೆಲ್ಲ ಅವರಿಗೆ ಮೊದಲೇ ಹೇಳಬೇಕು. ಟೀವಿಗೆ ಸೀರಿಯಲ್ ಮಾಡಿಕೊಟ್ಟಷ್ಟೇ ಕಷ್ಟದ ಕೆಲಸ. ಅದನ್ನು ಒಂದು ಟಾರ್ಗೆಟ್ ಗ್ರೂಪ್ ಓದುತ್ತದೆ, ಬದಲಾವಣೆ ಸೂಚಿಸುತ್ತದೆ. ಆ ರೀತಿ ಬರೆಯಿರಿ ಎನ್ನುತ್ತದೆ. ವರ್ಷಕ್ಕೊಮ್ಮೆ ನೀಡಲಾಗುವ ಬೂಕರ್ ಪ್ರಶಸ್ತಿಗೆ ಕಾದಂಬರಿಗಳನ್ನು ಬರೆಯುವುದೂ ಕೂಡ ಒಂದು ದಂಧೆಯೇ. ಅದೂ ಒಂದು ರೀತಿಯಲ್ಲಿ ಸೌಂದರ್ಯ ಸ್ಪರ್ಧೆ ಇದ್ದ ಹಾಗೆ. ತಿದ್ದಿ ತೀಡಿದ, ಬಣ್ಣ ಬಳಿದ, ಹೇಗೆ ವರ್ತಿಸಬೇಕು, ಹೇಗೆ ಉತ್ತರಿಸಬೇಕು ಅನ್ನುವುದನ್ನೆಲ್ಲ ಕಲಿತ ಬೆಡಗಿಯರ ಹಾಗೆ ಕಾದಂಬರಿಕಾರರೂ ಆಗಿಬಿಟ್ಟಿದ್ದಾರೆ.

ವಿಶ್ವಸಾಹಿತ್ಯದಲ್ಲಿ ಕಾದಂಬರಿಗಳು ಮಾತ್ರ ಉಳಿದು ಮಿಕ್ಕೆಲ್ಲ ಸಾಹಿತ್ಯ ಪ್ರಕಾರಗಳೂ ನಶಿಸಿಹೋಗಲಿವೆಯಾ ಎಂಬ ಅನುಮಾನ ಮತ್ತು ಆತಂಕಕ್ಕೆ ಕಾರಣವಾಗುವ ಬೆಳವಣಿಗೆಗಳಂತೂ ನಡೆಯುತ್ತಿವೆ. ಅದರ ಮಧ್ಯೆಯೂ ಇಲ್ಲಿ, ನಮ್ಮೂರಲ್ಲಿ ಕಾವ್ಯ, ಹನಿಗವಿತೆ, ವಿಮರ್ಶೆ, ಸಂಸ್ಕೃತಿ ವಿಮರ್ಶೆ, ಕಾದಂಬರಿ, ಸಣ್ಣಕತೆ ಮತ್ತು ಪ್ರಹಸನಗಳ ಮೂಲಕ ವೈವಿಧ್ಯವನ್ನೂ ವಿಸ್ಮಯವನ್ನೂ ಹುಟ್ಟಿಸಿಕೊಳ್ಳುತ್ತಾ ನಾವು ಜೀವಂತವಾಗಿದ್ದೇವೆ.

ಕರ್ನಾಟಕ ಪರಿಸರ ಮತ್ತು ಜಾನಪದ ಗೋಷ್ಟಿಗಳು - ಸಮಾನಾಂತರ ಗೋಷ್ಟಿ ವೇದಿಕೆಯಲ್ಲಿ

ಸಮಾನಾಂತರ ಗೋಷ್ಟಿ ವೇದಿಕೆಯಲ್ಲಿ ನಡೆದ ಜಾನಪದ ಗೋಷ್ಟಿ ಯಲ್ಲಿ ರಂಗಾರೆಡ್ಡಿ, ದಿ.ಕೆ.ರಾಜೇಂದ್ರ, ದಿ.ಬಿ .ನಾಯಕ್, ಚಕ್ಕೆರೆ ಶಿವಶಂಕರ್
Posted by Picasaಸಮಾನಾಂತರ ಗೋಷ್ಟಿ ವೇದಿಕೆಯಲ್ಲಿ ನಡೆದ ಕರ್ನಾಟಕ ಪರಿಸರ ಗೋಷ್ಟಿಯಲ್ಲಿ ಮಂಜುನಾಥ್, ಯತಿರಾಜ್, ಗಂಗಾಧರಮೂರ್ತಿ ಮತ್ತಿತರರು

‘ಹಕ್ಕಿ ಹಾರುತಿದೆ ನೋಡಿದಿರಾ..?’








-ಜಿ ಎನ್ ಮೋಹನ್

'ಓ ಬಿ ವ್ಯಾನ್ ಬೇಕು' ಅಂದೆ. ರಾಮೋಜಿ ಫಿಲಂ ಸಿಟಿಯ ಮೀಟಿಂಗ್ ಹಾಲ್ ನಲ್ಲಿದ್ದವರು ಏನೋ ಟೆರರಿಸ್ಟ್ ಅಟ್ಯಾಕ್ ಆಗಿದೆ ಅಂತ ಗಾಬರಿಯಾದರು. ಅಂತದ್ದೇನೂ ಇಲ್ಲ ಅಂದೆ. ಹಾಗಿದ್ರೆ ಸೋನಿಯಾ ಗಾಂಧಿ ಬರ್ತಾ ಇದ್ದಾರಾ ಅಂದ್ರು. ' ನೋ' ಅಂತ ತಲೆ ಆಡಿಸಿದೆ. ಮತ್ತೆ ಓ ಬಿ ವ್ಯಾನ್ ಯಾಕೆ ಅಂತ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನ ಕವರೇಜ್ ಗೆ ಅಂದೆ. ಒಂದು ಕ್ಷಣ ಎಲ್ಲರೂ ಮುಖ ಮುಖ ನೋಡಿಕೊಂಡರು. ಓ ಬಿ ವ್ಯಾನ್ ಗೂ ಸಾಹಿತ್ಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಬೆಟ್ಟದ ಮೇಲಿನ ನೆಲ್ಲೀಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ..?

ಇಂತದ್ದೇ ಗಾಬರಿ ನೇರಾ ನೇರಾ ರಾಮೋಜಿರಾಯರಿಗೇ ಆಗಿತ್ತು. ತೇಜಸ್ವಿ ಇಲ್ಲವಾದಾಗ ಈಟಿವಿಯ ಬುಲೆಟಿನ್ ಗಳೆಲ್ಲವೂ ಶೋಕ ಹೊದ್ದು ಕೂತಿತು. ಗಂಟೆಗೊಮ್ಮೆ ಪ್ರಸಾರವಾಗುವ ಬುಲೆಟಿನ್ ಗಳು ಹಾಂ, ಹ್ಞೂ ಎನ್ನುವುದರೊಳಗೆ ಮುಗಿದು ಹೋಗಿರುತ್ತವೆ. ಹಾಗಾಗಿ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಪ್ರೈಮ್ ಬುಲೆಟಿನ್ ಮಾತ್ರ ಎಲ್ಲರ ಗರುಡಗಣ್ಣನ್ನೂ ದಾಟಿಯೇ ಬರಬೇಕು. ಸಂಸ್ಥೆಯ ಮುಖ್ಯಸ್ಥರಿಂದ ಹಿಡಿದು ಮ್ಯಾನೇಜರ್ ವರೆಗೆ ಎಲ್ಲರೂ 'ನೈಟ್ ವಾಚ್ ಮನ್' ಗಳೇ..ಹಾಗಿರುವಾಗ ತೇಜಸ್ವಿ ಇಲ್ಲವಾದ ದಿನ ಇಡೀ ಬುಲೆಟಿನ್ ಅನ್ನು ತೇಜಸ್ವಿಗೆ ಮೀಸಲಿಟ್ಟಿದ್ದು ಎಲ್ಲರಿಗೂ ಷಾಕ್ ನೀಡಿತ್ತು. ತೇಜಸ್ವಿ ಇಲ್ಲ ಎನ್ನುವ ಸುದ್ದಿಯ ಮುಂದೆ ಇನ್ನೊಂದು ಸುದ್ದಿಯಾದರೂ ಎಲ್ಲಿ ಅನ್ನೋದು ನನ್ನ ನಿಲುವು. ಚೇರ್ಮನ್ ರಿಂದ ಬುಲಾವ್ ಬಂತು. ಅಲ್ಲ, ಇಡೀ ಬುಲೆಟಿನ್ ಅನ್ನು ಒಬ್ಬರಿಗೇ ಮೀಸಲಿಡೋದು ಎಷ್ಟು ಸರಿ? ಜಗತ್ತಿನ ಎಲ್ಲೂ ಇವತ್ತು ಏನೂ ಘಟಿಸಿಲ್ವ? ಅದೂ ಪ್ರೈಮ್ ಬುಲೆಟಿನ್ ನಲ್ಲಿ' ಅಂದ್ರು. ನನಗಂತೂ ಅವತ್ತಿನ ಮೆಗಾ ನ್ಯೂಸ್ ತೇಜಸ್ವಿಯೇ ಅನ್ನೋದು ಖಚಿತವಾಗಿ ಹೋಗಿತ್ತು. 'ತೇಜಸ್ವಿ ವಿನಾ ಬುಲೆಟಿನ್ ನ ಚಲತಿ' ಅಂತ ನಿರ್ಧರಿಸಿಬಿಟ್ಟಿದ್ದೆ.

ಸಾರ್, ನಮ್ಮ ನ್ಯೂಸ್ ಗೆ ಟಿ ಆರ್ ಪಿ ಬರೋದೇ ಮೊದಲ ಆದ್ಯತೆ ಆದ್ರೆ ನನ್ನನ್ನ ಬಿಟ್ಬಿಡಿ. ನನ್ನ ಮನಸ್ಸು ಹೇಳ್ತಿದೆ. ತೇಜಸ್ವಿ ಇಲ್ಲ ಅನ್ನೋ ಸುದ್ದಿ ಮಾತ್ರಾನೇ ಇವತ್ತು ಜನರಿಗೆ ಮುಖ್ಯ. ಅಕಸ್ಮಾತ್ ಟಿ ಆರ್ ಪಿ ಬರಲಿಲ್ಲ ಅಂದ್ರೆ ಇನ್ನು ಮುಂದೆ ನೀವು ಹೇಳಿದ ಹಾಗೆ ಕೇಳ್ತೀನಿ. ನೀವೇ ಹೇಳಿದ್ದೀರಲ್ಲಾ ಮೊದಲ ತಪ್ಪು ಮಾಡೋದಿಕ್ಕೆ ಎಲ್ಲರಿಗೂ ಅವಕಾಶವಿದೆ ಅಂತ ಅವರು ಹೇಳಿದ್ದ ಮಾತನ್ನೇ ರಕ್ಷಣೆಗೆ ಗುರಾಣಿಯಾಗಿ ಬಳಸಿದೆ. ರಾಮೋಜಿರಾಯರು ನನ್ನನ್ನ ಒಂದು ಕ್ಷಣ ನೋಡಿದವರೇ 'ಗೋ ಅಹೆಡ್' ಅಂದ್ರು. ತೇಜಸ್ವಿ ತೇಜಸ್ವಿಯೇ. ಸತತ ಮೂರು ದಿನ ಈಟಿವಿ ಚಾನಲ್ ತೇಜಸ್ವಿ ಎನ್ನುವ 'ನಿಗೂಢ ಮನುಷ್ಯ' ನನ್ನು ಸಾಧ್ಯವಿದ್ದ ದಿಕ್ಕಿನಿಂದೆಲ್ಲಾ ಸ್ಪರ್ಶಿಸಲು ಯತ್ನಿಸಿತು. ನನ್ನ ನಂಬಿಕೆ ಹುಸಿಹೋಗಲಿಲ್ಲ. ಅದುವರೆಗೂ ಬಾಂಬ್ ಸ್ಫೋಟಕ್ಕೆ, ಉಗ್ರರ ಧಾಳಿಗೆ, ಸರಣಿ ಹತ್ಯೆಗೆ, ವಿ ಐ ಪಿ ಪ್ರೆಸ್ ಕಾನ್ಫೆರೆನ್ಸ್ ಗೆ ಸೋನಿಯಾ, ಪ್ರಿಯಾಂಕಾ, ರಾಹುಲ್ ಭೇಟಿಗೆ, ಅಡ್ವಾಣಿ ಯಾತ್ರೆಗೆ ಮಾತ್ರ ಸೀಮಿತವಾಗಿ ಹೋಗಿದ್ದ ಬುಲೆಟಿನ್ ಗಳು ಸಾಹಿತ್ಯವನ್ನೂ ತಬ್ಬಿಕ್ಲೊಂಡಿತು. ಮಾರ್ಕೆಟಿಂಗ್ ಟೀಮ್ ನವರು ತಬ್ಬಿಬ್ಬಾಗಿ ಕುಳಿತಿದ್ದರು ಅದುವರೆಗೂ ಗೊತ್ತಿಲದ ಇನ್ನೊಂದು ಟಿ ಆರ್ ಪಿ ವಿನ್ನರ್ ಚಾನಲ್ ಅಂಗಳ ಪ್ರವೇಶಿಸಿತ್ತು. 'ಕಂಗ್ರಾಟ್ಸ್' ಅಂತ ಅದೇ ರಾಮೋಜಿರಾಯರು ಕೈ ಕುಲುಕಿದರು. ಸಾಹಿತ್ಯವೆಂಬ ಹಕ್ಕಿ ಪತ್ರಿಕೋದ್ಯಮದ ಅಂಗಳದಲ್ಲಿ ಹಾರಿತು.

ಅಷ್ಟೇ, ಆನಂತರ ಈಟಿವಿಗೆ ಸಾಹಿತ್ಯ ಅನ್ನೋದು ಎಂದಿಗೂ ಮೈಲಿಗೆಯಾಗಿ ಉಳಿಯಲಿಲ್ಲ. ನಮ್ಮ ವರದಿಗಾರರಿಗೆ ಸಾಹಿತ್ಯ, ಸಾಂಸ್ಕೃತಿಕ ಲೋಕದ ಕಣ್ಣೋಟ ಬೇಕು ಅಂತ ನೀನಾಸಂ ಸಂಸ್ಕೃತಿ ಶಿಬಿರಕ್ಕೆ ಕಳಿಸುವ ಪ್ರಸ್ತಾಪ ಮಾಡಿದರೆ ಮರುಕ್ಷಣ ಒಪ್ಪಿಗೆಯ ಮುದ್ರೆ ಬೀಳುತ್ತಿತ್ತು. ಓ ಬಿ ವ್ಯಾನ್ ಒಂದು ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಿಂದ ಶಿವಮೊಗ್ಗಕ್ಕೆ ಬಂದು ನಾಲ್ಕು ದಿನ ಇದ್ದು ಮತ್ತೆ ತನ್ನ ಮೂತಿ ಹೈದರಾಬಾದ್ ನತ್ತ ತಿರುಗಿಸುವ ವೇಳೆಗೆ ಖರ್ಚು ಏನಿಲ್ಲೆಂದರೂ ೧೦ ಲಕ್ಷ ಮೀರುತ್ತಿತ್ತು. ಆದರೆ ಯಾರಿಗೂ ಈ ಬಗ್ಗೆ ಅಬ್ಜೆಕ್ಷನ್ ಇರಲಿಲ್ಲ. ಶಿವಮೊಗ್ಗದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊತ್ತ ಮೊದಲ ಬಾರಿ ಓ ಬಿ ವ್ಯಾನ್ ಗಳು ಕಾಣಿಸಿಕೊಂಡಿದ್ದವು.

'ಸಾರ್, ಇದು ನೋಡಿ' ಅಂತ ಸಿದ್ಧು ಕಾಳೋಜಿ ನನ್ನನ್ನ ಮಾನಿಟರ್ ಮುಂದೆ ಕೂಡಿಸಿದಾಗ ನನ್ನೊಳಗೆ ತಕ್ಷಣ ಮಿಂಚೊಂದು ಹರಿದು ಹೋಯಿತು. ಅಲ್ಲಿಯವರೆಗೆ ಸಾಹಿತ್ಯ ಸಮ್ಮೇಳನದ ಕವರೇಜ್ ದಿನಗಟ್ಟಲೆ ಯಾರು ನೋಡುತ್ತಾರೆ ಎನ್ನುವ ಗುಂಗೀ ಹುಳು ನನ್ನನ್ನೂ ಕೊರೆಯುತ್ತಿತ್ತು. ಅದು ಕ್ಷಣ ಮಾತ್ರದಲ್ಲಿ ಪರಿಹಾರವಾಗಿ ಹೋಯ್ತು. ಸಿದ್ಧು ತೋರಿಸಿದ್ದು ಬೇರೆ ಬೇರೆ ವರದಿಗಾರರು ಸಮ್ಮೇಳನದ ಅಂಗಳದಿಂದ ಕಳಿಸಿದ್ದ ವಿಡಿಯೋ ಫೂಟೇಜ್ ಗಳನ್ನ. ಅದರಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ನಿದ್ದೆ ಹೊಡೆಯುತ್ತಿದ್ದ ದೃಶ್ಯ ಇತ್ತು. ಸಿದ್ಧು ಕೈ ಅದುಮಿದವನೇ ಎಲ್ಲಾ ನಿದ್ದೆ ಶಾಟ್ ಗಳನ್ನ ಬೇರೆ ಮಾಡಿ ಎಂದೆ. ಬಾಲು ಬುಲೆಟಿನ್ ಉಸ್ತುವಾರಿಗೆ ನಿಂತಿದ್ದರು. ತಕ್ಷಣ ಅವರಿಗೆ ನಾನು ಏನು ಯೋಚಿಸುತ್ತಿದ್ದೇನೆ ಎಂದು ಅರ್ಥವಾಗಿ ಹೋಯಿತು. ಬುಲೆಟಿನ್ ಆರಂಭವಾಗುತ್ತಿದ್ದಂತೆಯೇ 'ಸಮ್ಮೇಳನಕ್ಕೆ ನಿಮ್ಮ ಪ್ರತಿಕ್ರಿಯೆ ಏನು?' ಅಂತ ಶೀರ್ಷಿಕೆ ಫ್ಲಾಶ್ ಆಯ್ತು. ನಂತರ ಸಭಾಂಗಣದಲ್ಲಿ ಜನ ಥರಾವರಿ ಭಂಗಿಗಳಲ್ಲಿ, ನಾನಾ ಥರದ ನಿದ್ದೆಗೆ ಜಾರಿದ್ದು ಮೂಡುತ್ತಾ ಹೋದವು. ಹಿನ್ನೆಲೆಯಲ್ಲಿ ಗೊರಕೆ ಮ್ಯೂಸಿಕ್. ಡೆಸ್ಕ್ ನಲ್ಲಿ ಬುಲೆಟಿನ್ ನೋಡುತ್ತಾ ಇದ್ದ ಎಲ್ಲರೂ ಬಿದ್ದೂ ಬಿದ್ದೂ ನಗುತ್ತಿದ್ದರು. ಎಸ್! ನಮ್ಮ ಕೈಗೆ ದೃಶ್ಯ ಮಾಧ್ಯಮದ ಗ್ರಾಮರ್ ಸಿಕ್ಕು ಹೋಗಿತ್ತು.

ತುಮಕೂರು ಸಾಹಿತ್ಯ ಸಮ್ಮೇಳನಕ್ಕೆ ವರದಿ ಮಾಡಲು ಹೋದ ನನಗೆ ಮೊದಲು ಗೊತ್ತಾಗಿದ್ದು ಜನ ನೋಡಬೇಕಾದರೆ ಮೊದಲು ನೋಡುವಂತ ನ್ಯೂಸ್ ಕೊಡಬೇಕು ಅನ್ನೋದು. ಅದೇ ಸಪ್ಪೆ ಭಾಷಣ, ಅದೇ ಗೋಷ್ಥಿ ಅಂತ ಕೊಟ್ಟರೆ ಸಾಹಿತ್ಯವನ್ನ ಆಕರ್ಷಕವಾಗಿಸೋದಿಕ್ಕೆ ಸಾಧ್ಯವೇ ಇಲ್ಲ ಅಂತ ಗೊತ್ತಾಯ್ತು. ಆಗಲೇ ನಮ್ಮ ಕ್ಯಾಮೆರಾ ಸಮ್ಮೇಳನದ ಅಡಿಗೆ ಮನೆ, ಹೋಟೆಲ್ ಮುಂದಿನ ಭಾರೀ ಕ್ಯೂ, ನಕಲಿ ಊಟದ ಚೀಟಿಗಳು,ಸಾಹಿತ್ಯದ ಬುಕ್ ಸ್ಟಾಲ್ ನಲ್ಲಿ ಹಳ್ಳಿ ಶಕುನದ ಪುಸ್ತಕಗಳ ಕಡೆ ಹೊರಳಿದ್ದು. ಅನಂತಮೂರ್ತಿ ಅವರ ಮೆರವಣಿಗೆಗೆ ರೆಡಿ ಆಗಿದ್ದ ರಥದ ಚಕ್ರವೇ ಟುಸ್ ಅಂದಿದ್ದು, ವರದಿಗಾರರ ಮೇಲೆ ಪೋಲೀಸ್ ಲಾಟಿ ಬೀಸಿದ್ದು, ಸಾಹಿತ್ಯ ಪರಿಷತ್ ನವರು ಮೀಟಿಂಗ್ ನಲ್ಲಿ ಗುದ್ದಾಡಿಕೊಂಡಿದ್ದು ಎಲ್ಲಾ ಎಲ್ಲಾ ನ್ಯೂಸ್ ಆಯ್ತು. ಟಿ ಆರ್ ಪಿ ನೂ ಬಂತು, ಬ್ರೇಕಿಂಗ್ ನ್ಯೂಸೂ ಸಿಗ್ತು,

'ನನಗೆ ಕಿತ್ತೋಗಿರೋ ಖಾತೆ ಕೊಟ್ಟಿದಾರೆ' ಅಂತ ಗೂಳಿಹಟ್ಟಿ ಶೇಖರ್ ಒಬ್ರೇ ಕಿರುಚಿಕೊಳ್ತಾ ಇಲ್ಲ. ಯಾವುದೇ ಮೀಡಿಯಾ ಆಫೀಸ್ ಗೆ ಹೋಗಿ ನೋಡಿ ಸಾಹಿತ್ಯ, ನಾಟಕದ ಕವರೇಜ್ ಅಂದ್ರೆ ಮುಖ ಕೆಂಡ ಆಗಿ ಹೋಗುತ್ತೆ. ಯಾಕೆ ನಮಗೆ ಬಿ ಜೆಪಿ, ಕಾಂಗ್ರೆಸ್ ಬೀಟ್ ಕವರ್ ಮಾಡೋ ತಾಖತ್ ಇಲ್ವಾ? ವಿಧಾನಸೌಧ ರೌಂಡ್ಸ್ ನಮಗ್ಯಾಕೆ ಹಾಕಲ್ಲ ಅಂತ ಸಿಡಿಯೋ ಗೂಳಿಹಟ್ಟಿಗಳು ಪ್ರತೀ ಆಫೀಸ್ ನಲ್ಲೂ ಸಿಗ್ತಾರೆ. ಹೀಗೆ ಒದ್ದಾಡಿದ ಗೂಳಿಹಟ್ಟಿಗಳೇ ಪೇಪರ್, ಚಾನಲ್ ಚುಕ್ಕಾಣಿ ಹಿಡಿಯೋ ಕಾಲ ಬಂದರಂತೂ ' ಅಲ್ಲೀಗೆ ಹರ ಹರಾ ಆಲ್ಲಿಗೆ ಶಿವ ಶಿವಾ ಅಲ್ಲೀಗೆ ನಮ್ಮ ಕಥೀ ಸಂಪೂರ್ಣವಯ್ಯ..' ಅಂತ ಮಂಗಳ ಹಾಡ್ಬೇಕಾಗುತ್ತೆ.

ಸಾಹಿತ್ಯ ಸಮ್ಮೇಳನ ಅಂದ್ರೆ ಪತ್ರಿಕೆಗಳು ಹಬ್ಬ ಆಚರಿಸ್ತಾ ಇದ್ದ ಕಾಲಾನೂ ಒಂದಿತ್ತು ಯಾಕಂದ್ರೆ ಅದು ನುಡಿ ಹಬ್ಬ. ಸಾಹಿತ್ಯ ಅನ್ನೋದು ಪತ್ರಿಕೋದ್ಯಮದ ಸ್ಟೀರಿಂಗ್ ಅನ್ನೋ ನಂಬಿಕೆ ಇತ್ತು. ಹಾಗಾಗೀನೆ ವಿಶೇಷ ಪುರವಣಿಗಳು, ವರದಿ ಮಾಡೋದಿಕ್ಕೆ ಪತ್ರಕರ್ತರ ದಂಡು, ವರದಿ ಬರೆಯೋದರಲ್ಲಿ ಪೈಪೋಟಿ, ನೂರೆಂಟು ಫೋಟೋ..ಆದರೆ ಇವತ್ತು ಆ ಸಂಭ್ರಮ ಉಳಿದಿಲ್ಲ. ಯಾವ ಸಾಪ್ತಾಹಿಕ ಸಂಚಿಕೆಯಲ್ಲಿ ಕಥೆ, ಕವಿತೆಗೆ ಏಕೆ ಜಾಗ ಅಂತ ಯೋಚಿಸಿದ್ದ ವಿಜಯಕರ್ನಾಟಕವೇ ಇವತ್ತು ಸಾಹಿತ್ಯದ ಕವರೇಜ್ ನಲ್ಲಿ ಮುಂಚೂಣಿಯಲ್ಲಿದೆ. ಸಮ್ಮೇಳನ ಅಧ್ಯಕ್ಷರನ್ನ ತನ್ನ ಕಚೇರಿಗೆ ಕರೆಸಿ ಓದುಗರೊಂದಿಗೆ ಫೋನ್- ಇನ್ ನಡೆಸಿದೆ. ಸಂಯುಕ್ತ ಕರ್ನಾಟಕ ಒಳ್ಳೆ ಪುರವಣಿಯ ಮೂಲಕ ತಾನು ಜಾಗೃತವಾಗಿದ್ದೀನಿ ಅನ್ನೋದನ್ನ ಸಾರಿದೆ. ಯಾವತ್ತೂ ಸಾಹಿತ್ಯದ ವಿಷಯ ಬಂದಾಗ ನಾವು ಕಾದು ಕೂರುವಂತೆ ಮಾಡುತ್ತಿದ್ದ ಕನ್ನಡಪ್ರಭ ಆ ಗೆಲುವು ಉಳಿಸಿಕೊಂಡಿಲ್ಲ. ಪ್ರಜಾವಾಣಿಗಂತೂ ಸಂಪೂರ್ಣ ಗೊಂದಲ. ಒಂದು ಕಾಲಕ್ಕೆ ಸಾಲು ಸಾಲು ಸಾಹಿತಿಗಳನ್ನ ಬೆಳಕಿಗೆ ತಂದಿದ್ದ, ನವ್ಯ ಸಾಹಿತ್ಯಕ್ಕೆ ಅಡಿಪಾಯ ಹಾಕಿಕೊಟ್ಟಿದ್ದ, ಬಂಡಾಯದ ದನಿಗೆ ಸಾಥ್ ನೀಡಿದ್ದ ಪ್ರಜಾವಾಣಿ 'ದಾರಿ ಯಾವುದಯ್ಯಾ ವೈಕುಂಠಕೆ..'ಎಂಬಂತೆ ಸಕ್ಸಸ್ ಗೆ ಇರೋ ದಾರಿ ಯಾವುದು ಅಂತ ಗೊತ್ತಾಗದೆ ನಿಂತು ಬಿಟ್ಟಿದೆ. ಇವತ್ತಿನ ಪೇಪರ್ ಗಳನ್ನ ನೋಡಿದರೆ, ಚಾನಲ್ ಬದಲಿಸ್ತಾ ಹೋದರೆ ಸಾಹಿತ್ಯ ಅನ್ನೋದು ಪತ್ರಿಕೆಗಳ ಪಾಲಿಗೆ ಎಕ್ಸ್ಪೈರಿ ಡೇಟ್ ಮುಗಿದಿರೋ ಮಾತ್ರೆ ಥರಾ ಆಗ್ತಿದೆ ಅನ್ನೋದು ಸ್ಪಷ್ಟ.

ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಗೋಪಾಲಕೃಷ್ಣ ಪೈ ಅವರ ಅಷ್ಟು ದಪ್ಪದ ಕಾದಂಬರಿ ಸಪ್ನ ಸಾರಸ್ವತವನ್ನ ಓದಿ ಮುಗಿಸಿದ್ದಾರೆ, ತಾರಾ ಫಿಲಂ ಸೆಟ್ ನಲ್ಲಿ ಪುಸ್ತಕ ಓದುತ್ತಾ ಕೂಡ್ತಾರೆ, ಟಿ ಎನ್ ಸೀತಾರಾಂ ಸೀರಿಯಲ್ ನಲ್ಲಿ ಎಷ್ಟೊಂದು ಕವಿತೆ ಕೋಟ್ ಮಾಡ್ತಾರೆ. ಬಳ್ಳಾರಿ ಚನ್ನಬಸವಣ್ಣ ಬ್ಯಾಂಕ್ ಉದ್ಯೋಗದಲ್ಲಿದ್ರೂ ಪುಸ್ತಕ ಮಾಡೋದಿಕ್ಕೆ ಯಾಕೆ ಹೋದರು, ಅನ್ನೋದು ಮೀಡಿಯಾಗೆ ಹಬ್ಬದೂಟ ಆಗೋದಿಲ್ವಾ? ಬರೀ ಹೀರೋಯಿನ್ ಗಳಲ್ಲ ಪತ್ರಿಕೆ, ಚಾನಲ್ ಗಳೂ ಜೀರೋ ಬಾಡಿ ಗೇ ಮನಸೋತಿವೆ. ಆ ಬಾಡಿಗಾಗಿ ಹಂಬಲಿಸಿ ಡಯಟಿಂಗ್ ಶುರು ಮಾಡಿವೆ. ಆ ನಿಟ್ಟಿನಲ್ಲಿ ಮೊದಲು ವರ್ಜ್ಯ ಮಾಡಿರೋದೇ ಸಾಹಿತ್ಯವನ್ನ.

ಮೊನ್ನೆ ಎಚ್ ಎಸ್ ವೆಂಕಟೇಶ ಮೂರ್ತಿಗಳ ಮೂರು ಸಮಗ್ರ ಕೃತಿಗಳು ಬಿಡುಗಡೆಯಾಯ್ತು. ಅದೇ ದಿನ ಸಂಜೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂತಸದಲ್ಲಿರುವ ವೈದೇಹಿ ಬೆಂಗಳೂರಿನಲ್ಲಿ ಓದುಗರೊಂದಿಗೆ ಮಾತಿಗೆ ಕೂತರು. ಒಂದಿಷ್ಟು ಅಪವಾದ ಬಿಟ್ಟರೆ ಎಚ್ ಎಸ್ ವಿ, ವದೇಹಿ ಓದುಗರ ಮನೆಯೊಳಗೇ ಹೋಗದಂತೆ ಮಾಧ್ಯಮಗಳು ನೋಡಿಕೊಂದುಬಿಟ್ಟವು. ಇದೇ ಎಚ್ ಎಸ್ ವಿ, ಇದೇ ವೈದೇಹಿ ಇವತ್ತು ಯಾರ ಮನೆಯೊಳಗಾದರೂ ಕಾಲಿಡಬೇಕಾದರೆ 'ಪುನರ್ಜನ್ಮ' ಎತ್ತಿ ಬರಬೇಕು, ಇಲ್ಲಾ 'ಬಾಲ ಜ್ಞಾನಿ'ಗಳಾಗಿರಬೇಕು. ಇಲ್ಲಾ ಅವರ 'ಬದುಕು ಜಟಕಾ ಬಂಡಿ' ಆಗಿರಬೇಕು. ಇಲ್ಲಾ ಅಂದ್ರೆ ಕನಿಷ್ಠ ಪಕ್ಷ ಭಾನುವಾರ ಮಧ್ಯಾಹ್ನ ಚಿಕನ್ ಟಿಕ್ಕಾ ಮಾಡಲಾದರೂ ಬರಬೇಕು...

ಬುಕ್ ಟಾಕ್
ಪತ್ರಿಕೋದ್ಯಮಕ್ಕೂ ಸಾಹಿತ್ಯಕ್ಕೂ ಗೆರೆ ಎಳೆಯಲಾಗದ ಕಾಲ ಒಂದಿತ್ತು. ಪತ್ರಿಕೋದ್ಯಮ ಅನ್ನುವುದು ಅವಸರದ ಸಾಹಿತ್ಯ ಎನ್ನುವ ಹಿರಿಮೆಗೂ ಪಾತ್ರವಾಗಿತ್ತು. ಇಂತಹ ನಂಟನ್ನು ಪರಿಶೀಲಿಸುವ ಅಪರೂಪದ ಪ್ರಯತ್ನ- 'ಸಾಹಿತ್ಯ ಮತ್ತು ಪತ್ರಿಕೋದ್ಯಮ'. ಹಲವು ದಶಕಗಳ ಕಾಲ ಪತ್ರಿಕೋದ್ಯಮವನ್ನು ಭೋಧಿಸಿದ, ಸಾಹಿತಿಗಳೊಂದಿಗೆ ಒಡನಾಟವಿದ್ದ ಪ್ರೊ. ಬಿ ಎ ಶ್ರೀಧರ್ ಈ ಕೃತಿ ರಚಿಸಿದ್ದಾರೆ. ಆಂಗ್ಲ ಪತ್ರಿಕೋದ್ಯಮಕ್ಕೆ ಇದ್ದ ಸಾಹಿತ್ಯದ ನಂಟನ್ನು ಪರಿಶೀಲಿಸುತ್ತಾ, ಟಾಮ್ ವೂಲ್ಫ್ ಕೊಟ್ಟ ಕೊಡುಗೆಯನ್ನು ಗುರುತಿಸುತ್ತಾ ಹೋಗುವ ಶ್ರೀಧರ್ ಭಾರತದ ಪತ್ರಿಕೋದ್ಯಮದಲ್ಲಿ ನಡೆದ ಪ್ರಯೋಗಗಳನ್ನು ಪರಿಚಯಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಈ ಕೃತಿ ಪ್ರಕಟಿಸಿದೆ.

ಕೆಂಪ್ ಮೆಣಸಿನ್ಕಾಯ್
ಬಳ್ಳಾರಿನಲ್ಲಿ ಸಡನ್ನಾಗಿ ಹಾಜಿ, ಮಾಜಿ ಪತ್ರಕರ್ತ ಆರ್ ಜಿ ಹಳ್ಳಿ ನಾಗರಾಜ್ ಎದುರಾಗಿಬಿಡೋದಾ? . ಏನ್ಗುರು ಇಲ್ಲಿ.. ಅಂದೆ. ರೆಡ್ಡಿ ಗ್ಯಾಂಗು ಎತ್ತಾಕ್ಕೊಂಡು ಬಂದ್ಬಿಟ್ಟಿದೆಯಪ್ಪಾ ಅಂದ. ಏನ್ಸಮಾಚಾರ ಅಂದೆ. ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಇತ್ತಲ್ಲ ಅದಕ್ಕೆ ಕರಕೊಂಡು ಬಂದವ್ರೆ ಅಂದ. ಅದು ಸರಿ ಅದಕ್ಕೂ ನಿನಗೂ ಏನ್ ಸಂಬಂಧ ಅಂದೆ. 20 ವರ್ಷ ವಿಜಯನಗರದಲ್ಲೇ ಇದ್ನಲ್ಲ ಅದಕ್ಕೆ ಈ ರೆಡ್ದಿಗಾರುಗಳು ನನ್ನೇ ಕೃಷ್ಣದೇವರಾಯ ಅನ್ಕೊಂಡಿದಾರೆ. ಬೆಂಗಳೂರು ವಿಜಯನಗರದಲ್ಲಿ ಬಾಡಿಗೆ ಮನೆ ಮಾಡ್ಕೊಂಡು ಇದ್ದಿದ್ದೇ ತಪ್ಪಾ? ಅಂದ. ನಾನು ಡಿಟೋ ಟಿ ಪಿ ಕೈಲಾಸಂ ಸ್ಟೈಲ್ ನಲ್ಲಿ ತಪ್ಪೆವರದಿ?? ಅಂದೆ.

ಸಮ್ಮೇಳನಕ್ಕೆ ಸಿ.ಎಂ.... ಶ್ವಾನ ಸಮೀಕ್ಷೆ....

Posted by Picasa

ನಿರ್ಣಯ ಮಂಡನೆ ಹೊತ್ತು ಸೇರಿರುವ ಮಂಡಲಿ ಸಭೆ.


Posted by Picasaನಿರ್ಣಯ ಮಂಡಿಸಲು ಸೇರಿದ ಸಭೆ ಹೊಸ ಗೊತ್ತುವಳಿಗಳನ್ನು ಸೇರಿಸದೇ ಹಳೆಯ ಗೊತ್ತುವಳಿಗಳನ್ನೇ ಅನುಷ್ಥಾನ ಸಮಿತಿಗೆ ಒಪ್ಪಿಸಲು ತೀರ್ಮಾನಿಸಿತು. ಆಗ ಸಿ.ಸಿ.ಪಾಟೀಲರು 'ನೆರೆ ಸಂತ್ರಸ್ತರಿಗಾಗಿ ಪರಿಹಾರ ನೀಡಬೇಕು' ಎಂಬುದನ್ನು ಸೇರಿಸಲು ಕೋರಿಕೆ ಮಂಡಿಸಿದರು. ಗೊತ್ತುವಳಿಯನ್ನು ಅಂಗೀಕರಿಸಲಾಯ್ತು.

ಬಿ.ಆರ್.ಎಲ್. - ಅವರು ನುಡಿನಮನ ತಂಡದ ಕಾರ್ಯಕರ್ತರಿಗೆ ಹಸ್ತಾಕ್ಷರ ಕೊಡುತ್ತಿರುವುದು




ಡಾ|| ಎಚ್. ಎಸ್. ವಿ. ಅವರು ನುಡಿನಮನ ತಂಡದ ಕಾರ್ಯಕರ್ತರಿಗೆ ಹಸ್ತಾಕ್ಷರ ಕೊಡುತ್ತಿರುವುದು




ಮಾಧ್ಯಮ ಕೇಂದ್ರದಲ್ಲಿ ಕವಿಗಳಿಬ್ಬರ ನುಡಿನಮನ - ಬ್ಲಾಗ್ ತಾಣ ವೀಕ್ಷಣೆ


ಕನ್ನಡ ಸಾಹಿತ್ಯ ಲೋಕಕ್ಕೆ 'ಬ್ಲಾಗ್ ಮಾಡುವುದು' ಎಂಬುದು ಒಂದು ಸ್ವಾಗತಾರ್ಹ ಸೇರ್ಪಡೆ. ನಾಲ್ಕು ಜನ ಯುವಕರು ಇತರರಿಗೆ ಮಾದರಿಯಾಗಿದ್ದೀರಿ. ಈ ಕೆಲಸವನ್ನು ಎಡಬಿಡದೆ ಮುಂದುವರಿಸಿ. ನಿಮಗೆ ಅಭಿನಂದನೆಗಳು.
-ಹೆಚ್.ಎಸ್.ವಿ. ಮತ್ತು ಬಿ.ಆರ್.ಎಲ್.
Posted by Picasa

ವಿಶ್ವೇಶ್ವರ ಭಟ್ಟರಿಂದ ಆಲೆಮನೆ ಬಳಗಕ್ಕೆ ಶಭಾಸ್ ಗಿರಿ

ಸಾಹಿತ್ಯ ಸಮ್ಮೇಳನದ ಆಗು ಹೋಗುಗಳನ್ನು ಗಸ್ತು ತಿರುಗುತ್ತಾ ಗಂಟೆ ಗಂಟೆಗೂ ಅಪ್ಡೇಟ್ ಮಾಡುತ್ತಿರೋ ಆಲೆಮನೆ ಬಳಗಕ್ಕೆ ಆಲ್ ದಿ ಬೆಸ್ಟ್.

ಸಮ್ಮೇಳನದಂಗಳದಲ್ಲಿ ವಿಶ್ವೇಶ್ವರ ಭಟ್ಟರು



Posted by Picasa