ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವವರು ಕರುನಾಡ ಹಿರಿಯಕ್ಕನಂತಹ ಗೀತ ನಾಗಭೂಷಣ್ರವರು. ಸಾಹಿತಿಗಳು ಅಂದರೆ ನಮಗೆ ಮೊದಲು ಬರುವ ಚಿತ್ರವೇ ಜುಬ್ಬಾ, ಪೈಜಾಮ, ಗಡ್ಡ,..ಆ ಕಲ್ಪನೆಯಲ್ಲಿ ಸೀರೆ ಏಕಿಲ್ಲ ಎಂಬುದರ ಕುರಿತು ಶಶಿಕಲಾ ವೀರಯ್ಯಸ್ವಾಮಿಯವರು ಚರ್ಚಿಸಿದ್ದಾರೆ...


ಕನ್ನಡ ಮಹಿಳಾ ಸಾಹಿತ್ಯ ಒಂದು ಕಿರು ನೋಟ

ಸ್ನೇಹಿತರೇ, ವಿಷಯದ ವ್ಯಾಪ್ತಿ ವಿಶಾಲವಾದುದು. ಸ್ಥಳಾವಕಾಶ ತುಂಬಾ ಚಿಕ್ಕದು. ಲೇಖನದ ಆಶಯಕ್ಕೆ, ಸಮಗ್ರತೆಯ ಕೊರತೆ. ಅನಿಸಿದಂತೆ ನನ್ನ ತಪ್ಪಲ್ಲ. ಆದರೂ ಕ್ಷಮಿಸಿ, ಮಹಿಳಾ ಸಾಹಿತ್ಯವನ್ನು ಮೂರು ವರ್ಗೀಕರಣಗಳಲ್ಲಿಟ್ಟರೆ ನೋಟ ಸ್ವಲ್ಪ ಮಟ್ಟಿಗೆ ತಿಳಿಯಾಗಬಹುದು. 1) ಜನಪದ ಸಾಹಿತ್ಯ 2) ವಚನ ಕಾರ್ತಿಯರು ಮತ್ತು ಹರಿದಾಸಿಯರು 3) ಆಧುನಿಕ ಸಾಹಿತ್ಯ. ಆನಪದರಲ್ಲಿ ಅಕ್ಷರಾಭ್ಯಾಸವಿಲ್ಲದದ್ದರೂ, ಬದುಕಿನ ಅನುಭವಗಳನ್ನು ಅವರು ಪದ್ಯ (ತ್ರಿಪದಿ)ಗಳ ಮೂಲಕವೋ ಕಥೆಗಳ ಮೂಲಕವೋ ದೇಸೀ ಸಾಹಿತ್ಯವನ್ನು ಜಾರಿಯಲ್ಲಿಟ್ಟಿದ್ದರು. ಹೆನ್ಣು ಮಕ್ಕಳ ಕಾವ್ಯವಂತೂ ತುಂಬಾ ತೀವ್ರವಾಗಿತ್ತು. 12ನೆಯ ಶತಮಾನದ ಮತ್ತು ಅದಕ್ಕೆ ಹತ್ತಿರದ ಹಿಂದು-ಮುಂದಿನ ಕಾಲ ಘಟ್ಟಗಳಲ್ಲಿ ಮಹಿಳೆಯರು ಸಾಹಿತ್ಯ ರಚನೆಗಳಲ್ಲಿ ತೊಡಗಿಕೊಂಡಿದ್ದರು. ಆದರೆ 12ನೆಯ ಶತಮಾನದ ಸಮಾಜೋಧಾಮರ್ಿಕ ಕ್ರಾಂತಿಯಲ್ಲಿ ಭಾಗವಹಿಸಿದ 300ಕ್ಕೂ ಹೆಚ್ಚು ಹೆಣ್ಣು ಮಕ್ಕಳಲ್ಲಿ 33 ಜನ 'ವಚನ' ವೆಂಬ ಪ್ರಕಾರದಲ್ಲಿ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ. ಜಗತ್ತಿನ ಮಾಣ ಮಹಿಳಾ ಸಾಹಿತ್ಯದಲ್ಲಿ ಒಂದೇ ಕಾಲಕ್ಕೆ ಇಷ್ಟು ಜನಸಮಾಜ ಮುಖೀ ಸಾಹಿತ್ಯ ರಚನೆ ಮಾಡಿದ್ದು, ಕಡಿಮೆ ಎಂದೇ ಹೇಳಬೇಕು. ಹರಿದಾಸಿಯರು. ಉತ್ಕಟವಾದ ಭಕ್ತಿ ಪಂಥವನ್ನು ಹುಟ್ಟು ಹಾಕಿದರು.

ಆಧುನಿಕ ಕಾಲದಲ್ಲಿ ವಿದ್ಯಾಭ್ಯಾಸದ ಕಾರಣವಾಗಿ, ಬಹಳ ಜನ ಮಹಿಳೆಯವರು ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ತಮ್ಮ ಅಭಿವ್ಯಕ್ತಿಗಾಗಿ ದುಡಿಸಿಕೊಂಡಿದ್ದಾರೆ. ವಸ್ತುವಿನ ಆಯ್ಕೆಯಲ್ಲಿ ಕೂಡ ಬದುಕಿನ ಎಲ್ಲಾ ಕ್ಷೇತ್ರಗಳನ್ನು ಸ್ಪರ್ಶಿಸಿದ್ದಾರೆ. ಬಹುಶಃ ಹೆಚ್ಚಿನ ಸಂಖ್ಯೆಯಲ್ಲಿ ಕಾದಂಬರಿ ಪ್ರಕಾರವು ಜನಮೆಚ್ಚಿಗೆಯನ್ನು ಪಡೆದಿದೆ. ಅನೇಕರ ಕಾದಂಬರಿಗಳು-ಕಾವ್ಯಗಳು- ಬೇರೆ ಭಾಷೆಗಳಿಗೂ ಅನುವಾದಗೊಂಡಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ-ನಾಡೋಜಗಳಂಥ ಗೌರವಗಳಿಗೆ ಪಾತ್ರರಾದವರೂ ಆಧುನಿಕ ಕನ್ನಡ ಸಾಹಿತ್ಯದಲ್ಲಿದ್ದಾರೆ. ಮಹಾಕಾವ್ಯಗಳು ನಮಗೆ ಲಭ್ಯವಿವೆ. ವಿಮರ್ಶಾಕ್ಷೇತ್ರ- ಸಂಶೋಧನಾ ಕ್ಷೇತ್ರಗಳು, ಹಿಂದೆಂದಿಗಿಂತಲೂ ಇಂದು ತಮ್ಮನ್ನು ಹೆಚ್ಚು ವಿಸ್ತರಿಸಿಕೊಂಡಿವೆ. ಆದರೂ ಗಣನೀಯ ಸಂಖ್ಯೆಯ ಬಾಹುಳ್ಯವಿದ್ದರೂ, ಅದಕ್ಕೆ ನವ-ನವೀನ ಆಯಾಮಗಳು ಏಕೆ ದಕ್ಕಲಿಲ್ಲ? ಎನ್ನುವುದೊಂದು ಪ್ರಶ್ನೆ. ಅಕ್ಕಮಹಾದೇವಿಯಿಂದ ಹಿಡಿದು ತಿರುಮಲಾಂಬೆಗೆ, ಜಯದೇವಿತಾಯಿ ಲಿಗಾಎ, ಅನುಪಮಾ, ನಿರಂಜನ, ನಿರುಪಮಾ, ಕಮಲಾ ಹಂಪನಾ, ಟಿ.ಸುನಂದಮ್ಮ, ವೈದೇಹಿ, ಸಾರಾ ಅಬುಬಕ್ಕರ, ಶಾಂತಾ ಮಾಳಾಡ, ವೀಣಾ ಶಾಂತೇಶ್ವೃ, ನೇಮಿಚಂದ್ರ, ಪ್ರತಿಭಾ, ಲಲಿತಾ, ಸಿದ್ಧಬಸವಯ್ಯ..ಹೀಗೆ ಪತ್ನಿಯನ್ನೇ ಮಾಡಬಹುದು. ಇವರೆಲ್ಲ ಕನ್ನಡದ ವಿವಿಧ ಪ್ರಕಾರಗಳನ್ನು ಸಮೃದ್ಧಗೊಳಿಸಿದವರು. ಗಮನಾರ್ಹ ಬರವಣಿಗೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದವರು.

ಆದರೂ ಪರರಾಜ್ಯಗಳಿಗೆ ಹೋಲಿಸಿದಾಗ- ಜಾಗತಿಕ ಮಟ್ಟದ ಮಹಿಳಾ ಸಾಹಿತ್ಯದ ಹಿನ್ನೆಲೆಯಲ್ಲಿ ಗಮನಿಸಿದಾಗ, ಮಹಿಳಾ ಸಾಹಿತ್ಯದ ಸ್ಥಾನ ಎಲ್ಲಿದೆ?
'ಆನಾ ಆಹ್ಮತೋವಾ' ರಷ್ಯಾ ದೇಶದ ಹೆಸರಾಂತ ಕವಿ. ಅವಳ ಕಾವ್ಯ ರಾಜಕೀಯ ಯುದ್ಧಗಳ ಭೀಕರತೆಯನ್ನೂ, ಜೀವನದ ನಿರರ್ಥಕತೆಯನ್ನೂ ತುಂಬಾ ಆಳವಾದ ನೆಲೆಯಲ್ಲಿ ಪ್ರಶ್ನಿಸುವಂಥದು. 1986ರಲ್ಲಿ ರಷ್ಯಾದೇಶವು ಅವಳ ಜನ್ಮ ಶತಾಬ್ಧಿಯನ್ನು ವಿಜೃಂಭಣೆಯಿಂದ ಆಚರಿಸಿತು. ಅಷ್ಟೇ ಅಲ್ಲ, ಆಕಾಶದಲ್ಲಿನ ಒಂದು ಗ್ರಹಕ್ಕೆ ಅವಳ ಹೆಸರನ್ನು ಕೂಡಾ ಇಡಲಾಯಿತು. ಇದು ಜಗತ್ತಿನ ಒಂದು ಉದಾಹರಣೆಯಾದರೆ ಬಂಗಾಲೀ ಭಾಷೆಯಲ್ಲಿ ಮಹಾಶ್ವೇತಾದೇವಿ, ಯಂಥವರು ಆದಿವಾಸಿ ಜನರ ಜೊತೆ ಕಾಡಿನಲ್ಲೇ ವಾಸಮಾಡುತ್ತಾ, ಅವರ ಪರವಾಗಿ ಸರಕಾರದೊಡನೆ ಅದನ್ನೇ ಸಾಹಿತ್ಯ ರಚನೆ ಮಾಡಿದವರು. ಬಂಗಾಲಿಯಲ್ಲೇ ಮೂರು ಜನ ಮಹಿಳೆಯವರು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಪಂಚಾಚಿನ ಅಮೃತಾಪ್ರೀತಂ, ಮಲೆಯಾಳದ ಮಾಧವೀ ಕುಟ್ಟಿ (ಕಮಲಾ ದಾಸ್) ತಮ್ಮ ದಿಟ್ಟ ಧೋರಣೆಗಳಿಮದ ಜಗತ್ಪ್ರಸಿದ್ಧರಾದವರು, ಇತ್ತಿಚೆಗೆ ಮರಾಠಿ ಮಹಿಳಾ ಸಾಹಿತ್ಯದಲ್ಲಿ ಪ್ರಕಟವಾಗುತ್ತಿರುವ ಆತ್ಮಚರಿತ್ರೆ ಅಥವಾ ಆತ್ಮಕಥೆಗಳು, ಓದುಗರನ್ನು ಬೆಚ್ಚಿ ಬೀಳಿಸುತ್ತಿವೆ. ಯಾವ ಮುಲಾಜೂ ಇಲ್ಲದೇ, ನಿಸ್ಸಂಕೋಚವಾಗಿ , ನಿಭರ್ೀತರಾಗಿ ಬರೆಯುತ್ತಿರುವ ಅಲ್ಲಿಯ ಹೆಣ್ಣುಮಕ್ಕಳು ವಿಶೇಷವಾಗಿದ ಧಾಡಸೀತನದಿಂದಾಗಿ ಮಹಿಳಾ ಸಾಹಿತ್ಯದಲ್ಲಿ ಒಂದು ಹೊಸ ಸಂಚಲನೆಯನ್ನುಂಟು ಮಾಡಿದ್ದಾರೆ.

ಇದೆಲ್ಲಾ ಕನ್ನಡದಲ್ಲೇಕೆ ಇನ್ನೂ ಸಾಧ್ಯವಾಗಿಲ್ಲ? ಎಂಬ ಪ್ರಶ್ನೆ ಪದೇ ಪದೇ ನಮಗೆದುರಾಗುತ್ತಿದೆ. ಉತ್ತರಗಳ ದಟ್ಟಣೆ ಅಧಿಕವಾಗಿದೆ. ನಾನು ಕೆಲವನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಇತ್ತೀಚೆಗೆ ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ, 'ಶತಮಾನದ ಮಹಿಳಾ ಕಾವ್ಯ' ಎಂಬ ಕೃತಿಯನ್ನು ಸಂಪಾದಿಸಿಕೊಟ್ಟೆ. ಅದಿನ್ನೂ ಪ್ರಕಟಣೆಯ ಹಂತದಲ್ಲಿದೆ. ಅದಕ್ಕೊಂದು ಸುಧೀರ್ಘ ಪ್ರಸ್ತಾವಣೆಯನ್ನು ಬರೆದಿದ್ದೇನೆ. ಅಲ್ಲಿಯ ಮಾತುಗಳು ಇಲ್ಲಿಯೂ ಪ್ರಸ್ತುತವಾಗುವುದರಿಮದ ಕೆಲವನ್ನು ಎತ್ತಿಕೊಂಡಿದ್ದೇನೆ.

ಕನ್ನಡದಲ್ಲಿ ಸಂದರ್ಭದಲ್ಲಿ ಬರೆದಿರುವ, ಬರೆಯುತ್ತಿರುವ ಹೆಣ್ಣುಮಕ್ಕಳೆಲ್ಲ ಕೌಟುಂಬಿಕ ಜವಾಬ್ದಾರಿಗಳನ್ನು ಹೊತ್ತುಕೊಂಡೇ ಇದ್ದವರು. ಕೌಟುಂಬಿಕ ಬದ್ಧತೆ, ಹೆಣ್ಣಿಗೆ ಹೇರಿದ ಅನಿವಾರ್ಯ ಹೊಣೆ. ಅವಳಿಗೆ ಕುಟುಂಬವೇ ವಿಶ್ವ. ಆದರೆ ಗಂಡಿಗೆ, ಹೆಣ್ಣು ಕೇವಲ ಅವನ ವಿಶ್ವದ ಒಂದು ಘಟಕ ಮಾತ್ರ. ಅವಳಷ್ಟು ತೀವ್ರವಾಗಿ ಅವನು ತನ್ನನ್ನು ಕುಟುಂಬಕ್ಕೆ ಕಟ್ಟಿಕೊಳ್ಳಲಾರ. ಅದು ಅವನ ಜಾಯಮಾನವೇ ಅಲ್ಲ. ಗಂಡಸಿಗೆ, ತಾನು ಗಂಡಸಾಗಿರುವುದೇ ಒಂದು ಅಹಂಕಾರ (ಈಗೋ) ಇದು ಈಗೋ-ಆಗೋ ಹೋಗುವಂಥದ್ದಲ್ಲ. ಈ ಅಹಂನ ಜಗತ್ತಿನಲ್ಲಿ, ಅನಿಗೆ ಅವನ ಅಂತಸ್ತು, ಸಂಪತ್ತು, ಸ್ನೇಹಗಳಿಗೆ ಪ್ರಥಮ ಆದ್ಯತೆ, ಹೆಂಡತಿ-ಮಕ್ಕಳು, ಅವನ ವಿಶ್ವ ಸಂಚಾರದ ನದಿಯ ಎರಡು ದಡಗಳು ಮಾತ್ರ. ನದಿಯ ರಭಸಕ್ಕೆ ಬೆರಗಾಗುವ ಲೋಕ, ಅದನ್ನು ತೋಳಿನೊಳಗೆ ರಕ್ಷಿಸಿದ ದಡಗಳನ್ನು ಎಲ್ಲಿ ಗಮನಿಸುತ್ತದೆ? ದಡಗಳಿಗಾದರೂ, 'ಲೋಕ ತನ್ನನ್ನು ಕಂಡು ಬಎರಗಾಗಲೀ' ಎಂದು ಎಲ್ಲಿರುತ್ತದೆ? ಅದರ ಲಕ್ಷ್ಯವೆಲ್ಲ ತನ್ನ ತಾಯ್ತನದ ಸಂಭ್ರಮದಲ್ಲಿ ತಲ್ಲೀನವಾಗಿರುತ್ತದೆ. ತನ್ನ ತೋಳದಂಡೆಗಳಲ್ಲಿ ಕುಟುಂಬವನ್ನು ಸಂರಕ್ಷಿಸುವಲ್ಲೇ ಇಡೀ ತನ್ನ ಶಕ್ತಿ-ಚೈತನ್ಯಗಳನ್ನು ಧಾರೆ ಎರೆಯುತ್ತದೆ.

ಆದರೆ ಕುಟುಂಬದ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಲು, ಅವಳೂ ಹೆಗಲು ಕೊಡಲೂ ಉದ್ಯೋಗಿಯಾಗಬೇಕಾಗುತ್ತದೆ. ಆಧುನಿಕ ಜೀವನ ಶೈಲಿಗೆ ಉದ್ಯೋಗ ಅನಿವಾರ್ಯವಾದಾಗ ಅದು ಅವಳ ಬದುಕಿನ ಚೈತನ್ಯವನ್ನು ಒಳಗೊಳಗೇ ಖಾಲಿ ಮಾಡುತ್ತದೆ. ಹೈರಾಣು ಮಾಡುತ್ತದೆ. ಈಗ ಎರಡು ದೋಣಿಯ ಪ್ರಯಾಣದಲ್ಲಿ ಏಕಾಂತ, ಏಕಾಗ್ರತೆ, ಅನನ್ಯತೆಗಳು, ಅಲಭ್ಯವಾಗುವ ಕಾರಣ ಮತ್ತೆ ಮತ್ತೆ ಈ ಕೌಟುಂಬಿಕ- ಔದ್ಯೋಗಿಕ ಸುಳಿಗಳಲ್ಲಿ ಸುತ್ತತೊಡಗುವ ಸಾಹಿತ್ಯದ ಶಿಲ್ಪ ಅನೇಕಬಾರಿ ಶಿಥಿಲಗೊಳ್ಳುತ್ತದೆ. ಮಾನಸಿಕ-ದೈಹಿಕ ದಣಿವುಗಳು, ಸೃಜನಶೀಲ ಉಲ್ಲಾಸವನ್ನು ಕೊಂದು ಹಾಕುತ್ತವೆ.

ಪುರುಷ ಪ್ರಧಾನ ವ್ಯವಸ್ಥೆಯ, ಔದ್ಯಮಿಕ ಕ್ಷೇತ್ರ ಅವಳ ಪ್ರತಿಭೆಯನ್ನು ತುಳಿದು ಹಾಕಲು ಯತ್ನಿಸುತ್ತದೆ. ಇಂಥಲ್ಲಿ ಲೈಂಗಿಕ ಶೋಷಣೆಯ ಸಮಸ್ಯೆಗಳು ಇಂದು ಜಾಗತಿಕ ಮಟ್ಟದಲ್ಲಿ ಚಚರ್ೆಯಾಗುತ್ತಿವೆ. ದಿಟ್ಟವಗಿ, ಬದುಕುವ ಬರೆಯುವ ಹೆಣ್ಣನ್ನು ಈ ವ್ಯವಸ್ಥೆ ಹಿಂಡಿ ಪಿಂಡಿ ಮಾಡಿ ಬಿಡುತ್ತದೆ. (ಹೈದ್ರಾಬಾದ್ನಲ್ಲಿ ತಸ್ಲೀಮಾ ನಸ್ರೀಂ ಮೇಲೆ ದಿನಾಂಕ: 09-08-2007 ರಲ್ಲಿ ಹಲ್ಲೆನಡೆಯಿತು) ಇವೆಲ್ಲವುಗಳ ಜೊತೆಗೆ, ಬಸಿರು-ಬಾಣಂತನ-ಶಿಶುಪಾಲನೆಗಳು, ಅವಳ ಶಕ್ತಿ-ಸಮಯಗಳ ಬಹುಪಾಲನ್ನು ಕಬಳಿಸುತ್ತವೆ. ಹೊರಜಗತ್ತಿಗೆ ತೆರೆದುಕೊಳ್ಳಲು ಅವಳಿಗೆ ಸಾಧ್ಯವೇ ಆಗುವುದಿಲ್ಲ.

ಆದರೂ ಕೌಟುಂಬಿಕ ಚೌಕಟ್ಟಿನಲ್ಲಿ, ಗಂಡ-ಹೆಂಡತಿಯರ ಮನೋಭೂಮಿಕೆಗಳ ತಾಕಲಾಟಗಳು- ಮಧ್ಯವಯಸ್ಸಕ ಮಹಿಳೆಯರ ಚಡಪಡಿಕೆಗಳು, ದೈಹಿಕ ತುಡಿತಗಳು, ದೇಹ-ಮನಸ್ಸುಗಳ ಸೆಳೆತಗಳು, ವಿವಾಹಬಾಹಿರ ಸಂಬಂಧಗಳ ಜಟಿಲತೆಗಳು, ಸ್ತ್ರೀ-ಪುರಷರ ಭೌದ್ಧಿಕ ಸೌಹಚರ್ಯಗಳು, ಹೆಣ್ತನದ-ತಾಯ್ತನದ ವಿಶಿಷ್ಟಾ ಸ್ಪಂದನೆಗಳು ಇವೆಲ್ಲವುಗಳು ಕುರಿತು ನಾವಿನ್ನೂ ಮುಕ್ತವಾಗಿ ಬರೆದಿಲ್ಲ. ಅಮೆರಿಕನ್ ಲೇಖಕಿ 'ಲಾರಾ ಇಂಗಲ್ಸ್ ವೈಡರ್' 10 ಸಂಪುಟಗಳಲ್ಲಿ ತನ್ನ ಕುಟುಂಬದ ವಿಷಯವನ್ನೇ ಮನಮುಟ್ಟುವಂತೆ ಬರೆದು ವಿಶ್ವ ಪ್ರಸಿದ್ಧಳಾಗಿದ್ದಾಳೆ.

ಇವೆಲ್ಲವನ್ನೂ ಒಳಗೊಂಡು ಮಹಿಳಾ ಸಾಹಿತ್ಯದ ಸಾಧನೆ ಸಣ್ಣದೇನಲ್ಲ. ಇದನ್ನು ಡಾ|ಚಂದ್ರಶೇಖರ್ ಕಂಬಾರ ಅವರ ಮಾತುಗಳಿಂದ ಪುಷ್ಟೀಕರಿಸಬಹುದು. ಇಂದು ಪುರುಷ ಸಾಹಿತಿಗಳಿಗಿಂತ, ಮಹಿಳಾ ಸಾಹಿತಿಗಳು ಬದುಕನ್ನು ಭಿನ್ನವಾಗಿ ನೋಡುವ ಮೂಲಕ ಹೆಚ್ಚು ಸೃಜನಶೀಲರಾಗುತ್ತಿದ್ದಾರೆ. ಮಹಿಳೆಯರು ಪುರುಷರಿಗಿಂತ ಭಿನ್ನವಾಗಿ, ಭಾಷೆ-ಬದುಕನ್ನು ನೋಡುವುದರ ಮೂಲಕ ತಮ್ಮ ಸ್ವಂತಿಕೆಯನ್ನು ಹೆಚ್ಚು ಸ್ಪಷ್ಟಪಡಿಸುತ್ತಿದ್ದಾರೆ. ಕನ್ನಡ ಲೇಖಕಿಯರ, ಸ್ತ್ರೀ ಸಂವೇದನೆಯ ಸಾಹಿತ್ಯ ಪ್ರಕಾರಗಳು, ಹೆಚ್ಚು ಮೌಖಿಕವಾಗಿ ಮೂಡಿ ಬರುತ್ತಿವೆ. ಅವುಗಳನ್ನು ಯಾವ ವಿಮರ್ಶಕರೂ, ಲಘುವಾಗಿ ಪರಿಗಣಿಸುವಂತಿಲಲ್. (ಪ್ರಜಾವಾಣಿ.ದಿ.13.01.2004)