ಕಳೆದ 75 ಸಮ್ಮೇಳಾನ್ಬದಲ್ಲಿ ಹಲವು ಸಾವಿರ ನಿರ್ಣಯಗಳಾನ್ನು ಸರ್ವಾನುಮತದಿಂದ/ ಬಹುಮತದಿಂದ ಸ್ವೀಕರಿಸಲಾಗಿದೆ. ಆದರೆ ಈ ನಿರ್ಣಯಗಳ ಅನುಷ್ಟಾನ ಎಷ್ಟರ ಮಟ್ಟಿಗೆ ಆಗಿದೆ? ಯಾವ ಕಾರಣಕ್ಕಾಗಿ ನಿರ್ಣಯಗಳ ಅನುಷ್ಟಾನವಾಗಿಲ್ಲ?ಇದರಲ್ಲಿ ಸಾಹಿತ್ಯ ಪರಿಶತ್ತು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕನ್ನಡಿಗರ ಪಾತ್ರವೇನು? ಸ್ವಾತಂತ್ರ ಪೂರ್ವದಲ್ಲಿ ಕರ್ನಾಟಕ ರಾಜ್ಯ ಉದಯವಾಗುವವರೆಗೆ ನಿರ್ಣಯಗಳ ಅನುಷ್ಟಾನ ಯಾವರೀತಿ ಇತ್ತು? ನಂತರ 1970ರ ದಶಕದವರೆಗೆ ನಿರ್ಣಯ್ಗಳ ಅನುಷ್ಟಾನ, 1980ರ ದಶಕದಿಂದ 2010ರವರೆಗೆ ಎಂದು ಮೂರು ಭಾಗ ಮಾಡಿ ಪರಾಮರ್ಷನೆ ಮಾಡುವ ಅವಶ್ಯಕತೆ ಇದೆ. 1958ರಲ್ಲಿ ಕರ್ನಾಟಕದ ರಾಜ್ಯ ಉದಯವಾದ ಮೇಲೆ ವಿಶಾಲ ಸಮೃದ್ಧ ಕರ್ನಾಟಕದಲ್ಲಿ ಕನ್ನಡಕ್ಕೆ ಎಲ್ಲಾ ರಂಗದಲ್ಲೂ ಪ್ರಶ್ನಾತೀತವಾದ ಅಗ್ರಸ್ಥಾನ ಸಿಗಬೇಕಿತ್ತು.

ಆದರೆ ವಿದೇಶೀ ಮಾನಸಿಕತೆಯ ವಾತಾವರಣವನ್ನು ಸುಮಾರು ಸಾವಿರ ವರ್ಷಗಳಿಂದ ಪ್ರತ್ಯಕ್ಷ ಮತ್ತು ಪರೋಕ್ಶವಾಗಿ ಒಪ್ಪಿಕೊಂಡ ಸಮಾಜ ಆ ನಿಟ್ಟಿನಲ್ಲಿ ಪ್ರಯತ್ನಶೀಲವಾಗಬೇಕಾಯಿತು. ಹಾಗಾಗಿ ಸಮಸ್ತ ಕನ್ನಡಿಗರ ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ಕಾರ್ಯರಮಗಳನ್ನು ಹಮ್ಮಿಕೊಂಡು ರಾಜ್ಯದ, ಕನ್ನಡದ ಒಳಿತಿಗಾಗಿ ತನ್ನ ಸಮ್ಮೇಳನಗಳಲ್ಲಿ ಹಲವಾರು ನಿರ್ಣಯಗಳನ್ನು ರಾಜುಅದ ಪರವಾಗಿ ಮಂಡಿಸುತ್ತಾ ಬಂದಿತು. ಆದರೆ, ಈ ನಿರ್ಣಯಗಳ ಅನುಷ್ಟಾನದ ಬಗ್ಗೆ ಗಮನ ಸಾಕಾಗಲಿಲ್ಲ. ಅಲ್ಲದೇ ರಾಜ್ಯದ ಸಮಸ್ತ ಜನತೆ ಈ ನಿಟ್ಟಿನಲ್ಲಿ ತಮ್ಮ ಇಚ್ಛಾಶಕ್ತಿಯನ್ನು ತೋರಿಸಿಲ್ಲ ಎಂದೇ ಹೇಳಬೇಕು.ರಾಜ್ಯದ ಸರಿಸುಮಾರು ಆರು ಕೋಟಿ ಜನಸಂಖ್ಯೆಯಲ್ಲಿ ಒಂದು ಲಕ್ಷದಷ್ಟು ಜನ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದಾರೆ. ಈ ಸಂಖ್ಯೆ ಕನ್ಬಿಷ್ಟ ಹತ್ತು ಲಕ್ಷವಾದರೂ ಆಗಬೇಕು ಮತ್ತು ರಾಜ್ಯದ ಪ್ರತೀ ಹಳ್ಳಿಯಲ್ಲೂ ಕನಿಷ್ಟ ಐದು ಸದಸ್ಯರಾದರೂ ಇರುವಂತಾಗಬೇಕು. ಆಗ ಸಾಹಿತ್ಯ ಪರಿಷತ್ ನಿಜವಾದ ಅರ್ಥದಲ್ಲಿ ರಾಜ್ಯದ ಎಲ್ಲ ಪ್ರದೇಶದ ಜನರನ್ನು ಪ್ರತಿನಿಧಿಸುವ ಸಂಸ್ಥೆಯಾಗುತ್ತದೆ. ಅಂತೆಯೇ ಇನ್ನು ಮುಂದೆ ಸಮ್ಮೇಳನಗಳಲ್ಲಿ ಗರಿಷ್ಠ 25 ನಿರ್ಣಯಗಳನ್ನು ಮಾತ್ರ ತೆಗೆದುಕೊಳ್ಳುವ ಪದ್ಧತಿ ಜಾರಿಗೆ ಬರಬೇಕು.

ತ್ರೈಮಾಸಿಕಕ್ಕೊಮ್ಮೆ ರಾಜ್ಯದ ಹಿತದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಒಂದು ವರದಿ ತಲುಪಿಸಿ ರಾಜ್ಯದ ಸಮಕಾಲೀನ ಪರಿಸ್ಥಿತಿಯ ಅವಲೋಕನ ರಾಜ್ಯದ ಜನತೆಯ ಸಮಸ್ಯೆಗಳು, ವಿಶೇಷವಾದ ಸಾಂಸ್ಕೃತಿಕ ಹಬ್ಬಗಳ ಆಚರಣೆಗೆ, ಅಅರತಹಿಕ ಪರಿಸತಹಿತಿ, ನ್ಯಾಯಾಂಗ ಸುಧಾರಣೆ, ಭಾಷಾ/ಗಡಿ ಸಮಸ್ತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ, ತುರ್ತಾಗಿ ಆಗಬೇಕಾಗಿರುವ ವಿಷಯಗಳ ಬಗ್ಗೆ ತಿಳುವಳಿಕೆಯ ಮನವಿ ನೀತಿ ಅವರತೀವ್ರತೆಯ ಆಧಾರದ ಮೇಲೆ ಅನುಷ್ಟಾನಕ್ಕೆ ಪ್ರಯತ್ನಿಸಿದರೆ, ವಾರ್ಷಿಕ ಸಾಹಿತ್ಯ ಸಮ್ಮೇಳನದಲ್ಲಿ ಬಹುತೇಕ ಪಟ್ಟಿಯ ನಿರ್ಣಯಗಳನ್ನು ಸ್ವೀಕರಿಸುವ ಪ್ರಮೇಯವೇ ಬರುವುದಿಲ್ಲ.

ಅಂತೆಯೇ ಇಲ್ಲಿಯವರೆಗಿನ ಅತಿಮುಖ್ಯ ನಿರ್ಣಯಗಳಲ್ಲಿ ಅನುಷ್ಟಾನವಾಗಲೇಬೇಕಾದ ನಿರ್ಣಯಗಳನ್ನು ಅನುಶ್ಠಾನಗೊಳಿಸಲು ಸರ್ಕಾರದೊಂದಿಗೆ ವ್ಯವಹರಿಸಿ, ಸಾರ್ವಜನಿಕ ಜಾಗೃತಿ ಮೂಡಿಸಲು ಅನುಷ್ಟಾನವಾಗುವಂತಹ ರಾಜ್ಯದ ವಿವಿಧ ವಿಷಯಗಳ ತಜ್ಞರ ಉಪಸಮಿತಿಯನ್ನು ರಚಿಸಿ, ಆ ಸಮಿತಿ ತೀಕ್ಷ್ಣವಾಗಿ ಕಾರ್ಯೋನ್ಮುಖನಾಗುವತ್ತ ಹೋಗಬೇಕು. ಹಾಗೆ ಪ್ರತೀ ತ್ರೈಮಾಸಿಕಕ್ಕೊಮ್ಮೆ, ರಾಜ್ಯದ ಜನತೆಗೆ ಈ ವಿಷಯಗಳಲ್ಲಿ ಸಮೂಹ ಮಾಧ್ಯಮಗಳು ಮತ್ತು ತಮ್ಮ ಗೃಹ ಪತ್ರಿಕೆ, ಮತ್ತು ತನ್ನ ಅಂತರ್ಜಾಲ ತಾಣದಲ್ಲಿ ಈ ಕುರಿತು ಮಾಹಿತಿ ನೀಡುವುದು ಒಳಿತು ಇದರಿಂದ ರಾಜ್ಯದ ಜನತೆಗೆ ನಾಡಿನ ಪ್ರಮುಖ ವಿಷಯಗಳ ಕುರಿತಾಗಿ ಸಕರ್ಾರ ಎಡವಿರುವುದೆಲ್ಲಿ/ನಿಧಾನವಾಗುತ್ತಿರುವುದೆಲ್ಲಿ? ಎಂದು ತಿಳಿಯುತ್ತದೆ. ಇದರಿಂದ ಸಹಿತ್ಯ ಪರಿಷತ್ತು ಮತ್ತಷ್ಟು ನಾಡಿನ ಪರವಾಗಿ ಕೆಲಸ ಮಾಡಿ ಇನ್ನೂ ಹೆಚ್ಚಿನ ಜನಬೆಂಬಲವನ್ನು ಗಳಿಸಲು ಸಾಧ್ಯವಾಗುತ್ತದೆ.

ಟಿ.ಏನ್.ರಾಮಕೃಷ್ಣ