ಶ್ರೀ ರಾಮುಲುರನ್ನು ತಮ್ಮ ಅಂತ ಕರೆದಿದ್ದು ಬಂಡವಾಳಶಾಹಿಯ ಮುಂದೆ ನಡ ಬಗ್ಗಿಸಿದ್ದಲ್ಲ, ಅದು ಈ ಸೀಮೆಯ ಸಂಸ್ಕೃತಿ. ಇನ್ನು ಪ್ರಶಸ್ತಿಯ ವಿಚಾರ, ಶ್ರೀ ರಾಮುಲು ಸರ್ಕಾರದ ಪ್ರತಿನಿಧಿ ಅನ್ನುವ ಕಾರಣಕ್ಕೆ ಅವರನ್ನು ಪ್ರಶಸ್ತಿಯ ವಿಚಾರವಾಗಿ ಆಗ್ರಹಿಸಿದ್ದು. ಅದು ಅಂಗಲಾಚಿದ್ದಲ್ಲ, ಆಗ್ರಹಿಸಿದ್ದು. ಅದು ನಮ್ಮ ಹಕ್ಕು ಎಂದು ತಮ್ಮನ್ನು ಗೀತಕ್ಕ ಸಮರ್ಥಿಸಿಕೊಂಡರು.